ಲಕ್ನೋ ಮುಜಾಫರ್ ನಗರದ ಕೋಮುಗಲಭೆಗೆ ಬಿಜೆಪಿ ಶಾಸಕ ಸಂಗೀತ್ ಸೋಮ್ ದ್ವೇಷ ಭಾಷಣವೇ ಕಾರಣ ಎನ್ನುವ ಆರೋಪದ ಮೇಲೆ ಅವರನ್ನು ಬಂಧಿಸಿದ ಪೊಲೀಸರು ನ್ಯಾಯಾಂಗದ ವಶಕ್ಕೆ ಒಪ್ಪಿಸಿದ್ದಾರೆ. ಆದರೆ, ಆರೋಪಿ ಶಾಸಕನಿಗೆ ಜೈಲಿನಲ್ಲಿ ಪ್ರಮುಖ ಅಧಿಕಾರಿಯೊಬ್ಬರು ಕೈಮುಗಿದು ಸ್ವಾಗತಿಸಿದ ಘಟನೆ ವರದಿಯಾಗಿದೆ.