ಆಮ್ ಆದ್ಮಿ ಪಕ್ಷದ ಆಂತರಿಕ ಬೇಗುದಿಗೆ ಅಲ್ಪ ವಿರಾಮ ಬಿದ್ದಿದೆ. ದೆಹಲಿ ಸ್ಥಳೀಯ ಸಂಸ್ಥೆ ಚುನಾವಣೆ ಸೋಲಿನ ಬಳಿಕ ತಮ್ಮ ವಿರುದ್ಧವೇ ಬಂಡೆದಿದ್ದ ಕುಮಾರ್ ವಿಶ್ವಾಸ್ ಅವರನ್ನ ಸಮಾಧಾನಗೊಳಿಸುವಲ್ಲಿ ಕೇಜ್ರಿವಾಲ್ ಯಶಸ್ವಿಯಾಗಿದ್ದಾರೆ. ದೆಹಲಿಯಲ್ಲಿ ನಡೆದ ರಾಜಕೀಯ ವ್ಯವಹಾರಗಳ ಸಮಿತಿ ಸಭೆಯಲ್ಲಿ ಚರ್ಚೆ ಬಳಿಕ ಉಭಯ ನಾಯಕರೂ ಭಿನ್ನಾಭಿಪ್ರಾಯ ಬದಿಗೊತ್ತಿ ಒಂದಾಗಿದ್ದಾರೆ.