ನವದೆಹಲಿ: ತ್ರಿವಳಿ ತಲಾಖ್ ನಿಷೇಧ ವಿಚಾರ ಸದ್ಯಕ್ಕೆ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ನಡೆದು ತೀರ್ಪು ಬರುವುದೊಂದೇ ಬಾಕಿ. ಜುಲೈಗೆ ತೀರ್ಪು ಕಾದಿರಿಸಲಾಗಿದ್ದು, ಅಲ್ಲಿ ತ್ರಿವಳಿ ತಲಾಖ್ ಪದ್ಧತಿ ನಿಷೇಧವಾಗದಿದ್ದರೆ ಕೇಂದ್ರವೇ ಮಧ್ಯಪ್ರವೇಶಿಸಲಿದೆ ಎಂದು ಸಚಿವ ವೆಂಕಯ್ಯ ನಾಯ್ಡು ಹೇಳಿದ್ದಾರೆ.