ತಿಂಗಳಿಂದ ಉತ್ತರ ಪ್ರದೇಶ ವಿಧಾನಸಭಾ ಚುನಾವಣಾ ಪ್ರಚಾರದಲ್ಲ ತೊಡಗಿರುವ ಪ್ರಧಾನಿ ಮೋದಿ ಇತ್ತೀಚಿಗೆ ತಾವು ಉತ್ತರ ಪ್ರದೇಶದ ದತ್ತುಪುತ್ರ ಎಂದಿದ್ದರು. ಪ್ರಧಾನಿಯವರ ಈ ಮಾತಿಗೆ ಪ್ರತಿಕ್ರಿಯಿಸಿದ್ದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಪುತ್ರಿ ಪ್ರಿಯಾಂಕಾ ಗಾಂಧಿ, ಉತ್ತರ ಪ್ರದೇಶದ ಅಭಿವೃದ್ಧಿಗೆ ದತ್ತು ಪುತ್ರರ ಅಗತ್ಯವಿಲ್ಲ. ರಾಜ್ಯವನ್ನು ಉದ್ಧಾರ ಮಾಡಲು ಹೊರಗಿನವರು ಬರಬೇಕಿಲ್ಲ ಎಂದಿದ್ದರು.