ನವದೆಹಲಿ: ಬಿಜೆಪಿ ಮತ್ತು ಆರ್ ಎಸ್ಎಸ್ ಮೇಲೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೊಸ ಆರೋಪ ಮಾಡಿದ್ದು, ದೇಶದಲ್ಲಿ ಐತಿಹಾಸಿಕ ವ್ಯಕ್ತಿಗಳ ಮೂರ್ತಿ ಕೆಡವಲು ಪ್ರೇರಣೆ ಕೊಟ್ಟಿದ್ದಾರೆಂದು ದೂರಿದ್ದಾರೆ.ತ್ರಿಪುರಾದಲ್ಲಿ ಚುನಾವಣೆ ಗೆಲುವಿನ ಬಳಿಕ ಕಮ್ಯುನಿಸ್ಟ್ ನಾಯಕ ಲೆನಿನ್ ಪ್ರತಿಮೆ ಕೆಡವಲಾಯಿತು. ಅದಾದ ಬಳಿಕ ದೇಶದ ಹಲವೆಡೆ ಪ್ರಮುಖ ಐತಿಹಾಸಿಕ ನಾಯಕರ ಮೂರ್ತಿ ಕೆಡವುವ ಕೆಟ್ಟ ಚಾಳಿ ಆರಂಭವಾಯಿತು.ಇದೆಲ್ಲಾ ಬಿಜೆಪಿ ಮತ್ತು ಆರ್ ಎಸ್ಎಸ್ ಸಂಘಟನೆಯ ಕುಮ್ಮಕ್ಕಿನಿಂದ ನಡೆಯಿತು ಎಂದು ರಾಹುಲ್