ನವದೆಹಲಿ : ಸಿಜೆಐ ದೀಪಕ್ ಮಿಶ್ರಾ ಅವರು ನಿವೃತ್ತಿ(ಅ.2 ರಂದು)ಗೂ ಮುನ್ನ ಮಹತ್ವದ ಪ್ರಕರಣಗಳಿಗೆ ತೀರ್ಪನ್ನು ನೀಡುತ್ತಿದ್ದು, ಇದರಲ್ಲಿ ಒಂದಾದ ಆಧಾರ್ ಸಿಂಧುತ್ವ ಕುರಿತ ಪ್ರಕರಣಕ್ಕೆ ಇಂದು ಐವರು ಸದಸ್ಯರನ್ನೊಳಗೊಂಡ ಪೀಠ ಮಹತ್ವದ ತೀರ್ಪನ್ನು ನೀಡಿದ್ದು, ಈ ಮೂಲಕ ಆಧಾರ್ ಸಾಂವಿಧಾನಿಕ ಮಾನ್ಯತೆಯನ್ನು ಕೋರ್ಟ್ ಎತ್ತಿಹಿಡಿದಿದೆ.