ನವದೆಹಲಿ: ಒಂದನೇ ಹಂತದ ಲಾಕ್ ಡೌನ್ ಮುಕ್ತಾಯಗೊಳ್ಳುತ್ತಿದ್ದು, ದೇಶ ಎರಡನೇ ಹಂತದ ಲಾಕ್ ಡೌನ್ ಗೆ ಸಿದ್ಧವಾಗುತ್ತಿದೆ. ಈ ನಡುವೆ ಕೆಲವು ಅಗತ್ಯ ಕೈಗಾರಿಕಾ ಸ್ಥಾಪನೆಗಳ ಪುನರಾರಂಭಕ್ಕೆ ಕೇಂದ್ರ ಚಿಂತನೆ ನಡೆಸಿದೆ ಎನ್ನಲಾಗಿದೆ. ದೇಶದ ಆರ್ಥಿಕತೆ ಮೇಲೆ ಲಾಕ್ ಡೌನ್ ಭಾರೀ ಹೊಡೆತ ನೀಡುತ್ತಿದೆ. ಜತೆಗೆ ಬಡ ವರ್ಗದವರ, ದಿನಗೂಲಿ ನೌಕರರಿಗೆ ಆದಾಯವಿಲ್ಲದೇ ಹೋಗಿದೆ. ಹೀಗಾಗಿ ಈ ನಿಟ್ಟಿನಲ್ಲಿ ಕೆಲವು ಅಗತ್ಯ ಕೈಗಾರಿಕಾ ಸ್ಥಾಪನೆಗಳನ್ನು ಪುನರಾರಂಭಿಸಲು ಯೋಜನೆ ರೂಪಿಸುವಂತೆ ಪ್ರಧಾನಿ