ಸುಪ್ರೀಂ ಕೋರ್ಟ್ ತನ್ನ ಆದೇಶವೊಂದರಲ್ಲಿ ರೈಲಿನ ಚಾಲನೆಯಲ್ಲಿನ ವಿಳಂಬದಿಂದ ಹೆಚ್ಚು ಅನಾನುಕೂಲತೆ ಅನುಭವಿಸಿದ ವ್ಯಕ್ತಿಗೆ ಪರಿಹಾರ ಪಾವತಿಸಲು ರೈಲ್ವೆಯ ಕುಂದು ಕೊರತೆ ವಿಭಾಗದ ನಿರ್ದೇಶನವನ್ನು ಎತ್ತಿಹಿಡಿದಿದೆ . ರೈಲು ತನ್ನ ಸ್ಥಾನಕ್ಕೆ ಸಮಯಕ್ಕೆ ಸರಿಯಾಗಿ ಬರಲು ಏಕೆ ವಿಫಲವಾಯಿತು ಎಂಬುದನ್ನು ವಿವರಿಸಲು ಸಾಧ್ಯವಿಲ್ಲವೆಂದರೆ ರೈಲ್ವೆ ಇಲಾಖೆ ಹಣವನ್ನು ನೀಡಲೇಬೇಕು ಎಂದು ಕೋರ್ಟ್ ಹೇಳಿದೆ .