ಮಣ್ಣಿನ ಮಗ ನರೇಂದ್ರ ಮೋದಿ ಗೆಲುವನ್ನು ಆಚರಿಸಲು ಅವರ ತವರು ವಡ್ನಾಗರ್ ಸಂಭ್ರಮದಿಂದ ಸಿದ್ಧವಾಗುತ್ತಿದೆ. ಚುನಾವಣೋತ್ತರ ಸಮೀಕ್ಷೆಗಳು ಮೋದಿ ಭಾರತದ ಪ್ರಧಾನಿ ಆಗುತ್ತಾರೆಂದು ಭವಿಷ್ಯ ನುಡಿದಿರುವುದರಿಂದ ಅವರ ಹುಟ್ಟೂರು ಅಮಿತಾನಂದಲ್ಲಿ ಮುಳುಗಿ ತೇಲುತ್ತಿದ್ದು ಇಡಿ ಊರನ್ನು ಅಲಂಕೃತಗೊಳಿಸುವ ಕೆಲಸ ಭರದಿಂದ ಸಾಗಿದೆ. ಊರಿನ ಎಲ್ಲ ಬೀದಿಗಳಲ್ಲಿ, ಪ್ರತಿ ಮನೆಗಳಲ್ಲಿ, ಮರಗಿಡಗಳ ಮೇಲೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಮಿನುಗುವ ವಿದ್ಯುತ್ ಬಲ್ಬ್ಗಳನ್ನು ಜೋಡಿಸಲಾಗಿದ್ದು, ಫಲಿತಾಂಶ ಪ್ರಕಟವಾಗುವ ದಿನವಾದ ಶುಕ್ರವಾರ