ಅಹಮದಾಬಾದ್-ಇಂದೋರ್ ರಾಷ್ಟ್ರೀಯ ಹೆದ್ದಾರಿ ಬಳಿ ಇರುವ ಧರ್ ಎಂಬ ಸ್ಥಳದಿಂದ ಸುಮಾರು 47 ಕಿ. ಮೀ ಅಂತರದಲ್ಲಿ ಮೋಹನ್ ಖೇಡಾ ತೀರ್ಥ ಕ್ಷೇತ್ರವಿದ್ದು, ಇದು ಜೈನ ಧರ್ಮೀಯರ ಪವಿತ್ರ ಕ್ಷೇತ್ರ ಎಂದು ಹೇಳಲಾಗುತ್ತದೆ. 1940ರಲ್ಲಿ ಶ್ರೀ ರಾಜೇಂದ್ರ ಸುರೀಶ್ವರಜಿ ಈ ಜೈನ ಕ್ಷೇತ್ರವನ್ನು ಸ್ಥಾಪಿಸಿದರು. ಈ ಜೈನ ತೀರ್ಥ ಯಾತ್ರಾ ಸ್ಥಳದಲ್ಲಿ 16 ಅಡಿ ಎತ್ತರದ ಪದ್ಮಾಸನದಲ್ಲಿ ಕುಳಿತಿರುವ ಭಗವಾನ್ ಆದೀಶ್ವರನಾಥ ತೀರ್ಥಂಕರರ ಸೌಮ್ಯವಾದ ಬೃಹತ್ ಮೂರ್ತಿ ಇದೆ.