ಹಿಂದೂ ದೇವತೆಗಳಲ್ಲಿ ಕೃಷ್ಣನಿಗೆ ವಿಶಿಷ್ಟ ಸ್ಥಾನ. ಲೀಲಾಮಯಿ ಕೃಷ್ಣನದು ಸರ್ವರೂ ಇಷ್ಟಪಡುವ ಸರ್ವೋತ್ತಮ ವ್ಯಕ್ತಿತ್ವ. ಆತ ಧರೆಗೆ ಅವತರಿಸಿದ ಪುಣ್ಯದಿನದಂದು ಹಿಂದೂಗಳು ಶ್ರದ್ಧಾಪೂರ್ವಕವಾಗಿ ಕೃಷ್ಣಾಷ್ಟಮಿಯನ್ನು ಆಚರಿಸುತ್ತಾರೆ. ಈ ಬಾರಿ ಆಗಸ್ಟ್ 25ರಂದು ಬಂದಿದೆ ಕೃಷ್ಣ ಜಯಂತಿ.