ಎಲ್ಲರ ಹೃದಯದಲ್ಲೂ ವಿಶೇಷ ಸ್ಥಾನ ಪಡೆದಿರುವ ಕೃಷ್ಣನದು ಪರಿಪೂರ್ಣ ಬದುಕನ್ನು ಹೇಗೆ ಸವಿಯುವುದೆಂದು ಸಂಪೂರ್ಣ ಮಾನವ ಕುಲಕ್ಕೆ ತೋರಿಸಿಕೊಟ್ಟ ಧೀಮಂತ ವ್ಯಕ್ತಿತ್ವ. ಎಲ್ಲರ ಮನಸ್ಸಲ್ಲೂ ಸ್ಪೂರ್ತಿಯನ್ನು ಉಕ್ಕಿಸಬಲ್ಲ ಮಾನವರೂಪದಲ್ಲಿ ಬಂದ ದೈವ ಗೋವಿಂದನ ಜನ್ಮದಿನವನ್ನು ಈ ಬಾರಿ, ಗುರುವಾರ ಆಗಸ್ಟ್ 25 ರಂದು ದೇಶಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಆತನ ವ್ಯಕ್ತಿತ್ವ ಉತ್ಸಾಹ , ಪ್ರಶಾಂತತೆ, ಸದಾಚಾರ ಮತ್ತು ಎಲ್ಲಾ ದೈವತ್ವದ ಮೇಲ್ಮಟ್ಟವನ್ನು ಪ್ರತಿಬಿಂಬಿಸುತ್ತದೆ. ವಿಷ್ಣುವಿನ ಒಂದು ಅವತಾರವಾಗಿ ಭೂಮಿಯ