ಬೆಂಗಳೂರು : ಇಷ್ಟು ದಿನ ಬೆಂಗಳೂರಿನ ಏರಿಯಾಗಳಲ್ಲಿ ಬೀದಿ ನಾಯಿ ಕಾಟದ ಬಗ್ಗೆ ಬಿಬಿಎಂಪಿಗೆ ದೂರು ದಾಖಲಾಗುತ್ತಿತ್ತು. ಆದರೆ ಈ ಬಾರಿ ಬೆಕ್ಕುಗಳ ವಿರುದ್ಧ ಸ್ಥಳೀಯ ನಿವಾಸಿಗಳು ದೂರು ನೀಡಿದ್ದು, ಬೆಕ್ಕಿನ ಕಾಟಕ್ಕೆ ಬೇಸತ್ತಿರೋ ಸ್ಥಳೀಯರು ದಯಾಮಾಡಿ ಬೆಕ್ಕುಗಳಿಗೂ ನಾಯಿಗಳಂತೆ ಸಂತನಾಹರಣ ಚಿಕಿತ್ಸೆ ಮಾಡುವಂತೆ ಮನವಿ ಮಾಡಿದ್ದಾರೆ.