ಬೆಂಗಳೂರು: ವಿಧಾನಸೌಧದಲ್ಲಿ ದಲ್ಲಾಳಿಗಳ ಕಾಟ ತಡೆಗಟ್ಟಲು ಮಾಧ್ಯಮಗಳಿಗೂ ನಿಷೇಧ ಹೇರಿ ವಿವಾದಕ್ಕೊಳಗಾಗಿದ್ದ ಸಿಎಂ ಕುಮಾರಸ್ವಾಮಿ ಯಾರೇ ಬಂದರೂ ಸರ್ಕಾರಿ ಮಾಹಿತಿಗಳನ್ನು ಕೊಡಬೇಡಿ ಎಂದು ಅಧಿಕಾರಿಗಳಿಗೆ ನೀಡಿದ್ದಾರೆನ್ನಲಾಗಿರುವ ಆದೇಶ ವಿವಾದಕ್ಕೆ ಕಾರಣವಾಗಿದೆ.ಎಚ್ ಡಿಕೆ ಇಂತಹದ್ದೊಂದು ಆದೇಶ ನೀಡಿದ್ದಾರೆಂದು ಖಾಸಗಿ ವಾಹಿನಿಯೊಂದರ ವರದಿ ಆಧರಿಸಿ ವಿಪಕ್ಷ ನಾಯಕ ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿಗಳ ನಡೆಯನ್ನೇ ಅನುಮಾನಿಸಿದ್ದಾರೆ.ಸರ್ಕಾರ ಯಾಕೆ ತನ್ನ ಕಾರ್ಯಕ್ರಮಗಳ ಕುರಿತು ಜನರಿಂದ ಗೌಪ್ಯವಾಗಿಟ್ಟುಕೊಳ್ಳಬೇಕು. ಭ್ರಷ್ಟಾಚಾರ ತಾಂಡವವಾಡುತ್ತಿದ್ದರೆ ಮಾತ್ರ ಈ ರೀತಿ ಒಳಗೊಳಗೇ ಕೆಲಸ