ಬೆಂಗಳೂರು : ನಿನ್ನೆ ಮೊನ್ನೆ ಮಳೆಯ ಅವಾಂತರಗಳಿಂದ ಜನ ಇನ್ನೂ ಚೇತರಿಸಿಕೊಂಡಿಲ್ಲ.ಬಿಬಿಎಂಪಿ ಸಂಪೂರ್ಣವಾಗಿ ಎಚ್ಚೆತ್ತಿಲ್ಲ. ಈ ಮಧ್ಯೆ, ಸತತ ನಾಲ್ಕನೇ ದಿನವೂ ಸಂಜೆ ಮಳೆಗೆ ನಗರವು ತತ್ತರಿಸಿದೆ.ಧೋ ಎಂದು ಒಂದೇ ಸಮನೆ ಸುರಿದ ಮಳೆಯಿಂದ ನಗರದ ರಸ್ತೆಗಳೆಲ್ಲಾ ಸಂಪೂರ್ಣ ಜಲಮಯವಾಗಿ ವಾಹನ ಸವಾರರು ಪರದಾಡಿದ್ದಾರೆ.ವಸಂತನಗರದ ರಸ್ತೆಗಳಲ್ಲಿ ಮೊಳಕಾಲುದ್ದ ನೀರು ನಿಂತು, ವಾಹನಗಳು ಕೆಟ್ಟು ನಿಂತಿವೆ. ಎಂಜಿ ರೋಡ್, ಶಾಂತಿನಗರ, ಹಲಸೂರು, ಶಿವಾಜಿನಗರ ಸೇರಿ ಹಲವೆಡೆ ಭಾರೀ ಮಳೆ ಆಗಿದ್ದು, ತಗ್ಗು