ಮಂಗಳೂರು: ಸಿಎಂ ಕುಮಾರಸ್ವಾಮಿ ವಿರುದ್ಧ ಫೇಸ್ ಬುಕ್ ನಲ್ಲಿ ಅವಹೇಳನಕಾರಿಯಾಗಿ ಪೋಸ್ಟ್ ಬರೆದ ಮಂಗಳೂರು ಮೂಲದ ಯುವಕನನ್ನು ಪೊಲೀಸರು ಅರೆಸ್ಟ್ ಮಾಡಲಾಗಿದೆ.24 ವರ್ಷದ ಪ್ರಶಾಂತ್ ಪೂಜಾರಿ ಎಂಬಾತ ಬಂಧಿತ ಯುವಕ. ಈತ ಫೇಸ್ ಬುಕ್ ನಲ್ಲಿ ಕುಮಾರಸ್ವಾಮಿ ಫೋಟೋ ಜತೆಗೆ ಆತ ಯಾರು ಎಂದು ಪ್ರಶ್ನಿಸುತ್ತಿರುವ ಮಹಿಳೆಯ ಚಿತ್ರವನ್ನೂ ಹಾಕಿ ಅವಹೇಳನಕಾರಿಯಾಗಿ ಬರೆದುಕೊಂಡಿದ್ದ.ಇದನ್ನು ಕುಡ್ಲ ಟ್ರೋಲ್ಸ್ ಎಂಬ ಫೇಸ್ ಬುಕ್ ಪೇಜ್ ನಲ್ಲಿ ಪ್ರಕಟಿಸಿದ್ದ. ಇದೇ ಕಾರಣಕ್ಕೆ ಯುವಕನನ್ನು ಬಂಧಿಸಲಾಗಿದೆ.