ಬಹುನಿರೀಕ್ಷೆಯ ಚಿತ್ರ 'ಚಾಂದನಿ ಚೌಕ್ ಟು ಚೀನಾ'ದಲ್ಲಿ ಧಾರ್ಮಿಕ ಗುರು ಬುದ್ಧನ ಜನನ ಸ್ಥಳ ಬಗ್ಗೆ ಇದ್ದ ಮಾಹಿತಿಯನ್ನು ತಪ್ಪಾಗಿ ನೀಡಲಾಗಿದೆ ಎಂದು ಆರೋಪಿಸಿ ನೇಪಾಲದಲ್ಲಿ ಚಿತ್ರವನ್ನು ಬಹಿಷ್ಕರಿಸಲಾಗಿದೆ. ಪ್ರತಿಭಟನೆಯಲ್ಲಿ ವ್ಯಾಪಕ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದು, ಚಿತ್ರ ಪ್ರದರ್ಶನದ ವಿರುದ್ಧ ಘೋಷಣೆಗಳನ್ನು ಹೊರಡಿಸಿದ್ದಾರೆ.