ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಬರುತ್ತಿದೆ ನಕ್ಕುನಗಿಸಲು 'ಸತ್ಯವಾನ್ ಸಾವಿತ್ರಿ'
ಸುದ್ದಿ/ಗಾಸಿಪ್
Feedback Print Bookmark and Share
 
'ರಾಮಶಾಮಭಾಮ' ಚಿತ್ರದ ನಂತರ ನ ಕ್ಕು ನಗಿಸಲು ಬರುತ್ತಿದೆ 'ಸತ್ಯವಾನ್ ಸಾವಿತ್ರಿ'. ಪೌರಾಣಿಕ ಕಥೆಯ ಹೆಸರುಳ್ಳ ಈ ಚಿತ್ರ ಪೌರಾಣಿಕವಲ್ಲ ಎಂಬುದು ವಿಶೇಷ. ರಾಮಶಾಮ ಭಾಮದ ರೂವಾರಿ ರಮೇಶ್, ಪ್ರೇಕ್ಷಕರನ್ನು ಮತ್ತೆ ಈ ಚಿತ್ರದಲ್ಲೂ ನಕ್ಕುನಗಿಸಲಿದ್ದಾರೆ.

ರಮೇಶ್ ಅರವಿಂದ್ ಅಂದರೆ ಹಾಗೆ. ಗೆಲ್ಲುವ ಕುದುರೆ. ಪ್ರೇಕ್ಷಕನ್ನು ಮೋಡಿ ಮಾಡುವ ಚತುರ. ಗಡಿಬಿಡಿಗೆ ಒಳಗಾಗದೆ ಒಂದಾದ ಮೇಲೆ ಮತ್ತೊಂದು ಯಶಸ್ಸಿನ ಚಿತ್ರಗಳನ್ನು ನಿರ್ದೇಶಿಸುವಲ್ಲಿ ಕರಗತ ಮಾಡಿಕೊಂಡವರು. ಹೊಸ ಹೆಸರು, ವಿನೂತನವಾದ ಕಥಾ ಹಂದರವನ್ನು ಹುಡುಕಿಕೊಂಡು ಚಿತ್ರದ ಯಶಸ್ಸಿಗೆ ದುಡಿಯವುದು ರಮೇಶ್ ಸ್ಟೈಲ್.

ಅಂದ ಹಾಗೆ, ಈ ಸತ್ಯವಾನ್ ಸಾವಿತ್ರಿ ಫ್ರೆಂಚ್ ನಾಟಕ ಆಧರಿಸಿರುವ ಕಥೆಯಿದೆ. ನಿರ್ಮಾಪಕರಾಗಿರುವ ಪಾಲ್ ಚಂದಾನಿ ತಮ್ಮ ನೂತನ ಚಿತ್ರ ಸತ್ಯವಾನ್ ಸಾವಿತ್ರಿ ಬಗ್ಗೆ ದಿಲ್ ಖುಷ್ ಆಗಿದ್ದಾರೆ.

ಅಂದ ಹಾಗೆ ಈ ಚಿತ್ರಕ್ಕೆ ನಾಯಕಿಯರು ಯಾರು ಎಂಬುದನ್ನು ಹೇಳಲೇಬೇಕು. 'ಜೋಗಿ' ಚಿತ್ರದ ಯಶಸ್ಸಿನ ಜೋಗತಿ ಜೆನ್ನಿಫರ್, ಹಾಗೂ ಕೊಡಗಿನ ಬೆಡಗಿ ಡೈಸಿ ಬೋಪಣ್ಣ,

ಇಬ್ಬರೂ ಗ್ಲಾಮರ್ ತಾರೆಯರು. ಸದ್ಯ ಒಂದೇ ಶೆಡ್ಯೂಲ್ ಚಿತ್ರವನ್ನು ಮುಗಿಸಿದ್ದಾರೆ ರಮೇಶ್ ಅರವಿಂದ್. ಫುಲ್ ಕಾಮಿಡಿ ಸಾರ್. ದುಡ್ಡು ಕೊಟ್ಟು ಥಿಯೇಟರ್ ಹೋದವನು ಹೊಟ್ಟೆ ಹುಣ್ಣಾಗುವಂತೆ ನಕ್ಕು ಬಿಡಬೇಕು. ಅದೇ ಚಿತ್ರತಂಡದ ಉದ್ದೇಶ. ಯಾಂತ್ರಿಕ ಬದುಕಿನಲ್ಲಿ ನಗುವಿಗೆ ಕೊರತೆಯಾಗಿದೆ. ಇಂತಹ ಸಂದರ್ಭದಲ್ಲಿ ನಕ್ಕುನಗಿಸೋಕೆ ನಾವು ಬರುತ್ತಿದ್ದೇವೆ. ಗುರುಕಿರಣ್ ಸಂಗೀತ ಸಂಗೀತ ಪ್ರೇಮಿಗಳನ್ನೂ ಸೆಳೆಯಲಿದೆ ಎನ್ನುತ್ತಾರೆ ರಮೇಶ್.