ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಕ್ಯಾನೆ ಚಿತ್ರೋತ್ಸವಕ್ಕೆ ನಾಗತಿಹಳ್ಳಿ
ಸುದ್ದಿ/ಗಾಸಿಪ್
Feedback Print Bookmark and Share
 
FILM
PTI
ಕನ್ನಡದ ಹೆಸರಾಂತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರು ಜಾಗತಿಕ ಪ್ರತಿಷ್ಠೆಯ ಚಿತ್ರೋತ್ಸವ ಕ್ಯಾನೆಗೆ ಆಹ್ವಾನಿತರಾಗಿದ್ದಾರೆ. ಇದೀಗ ಅವರು ಅತ್ತ ಪ್ರಯಾಣ ಬೆಳೆಸಿದ್ದಾರೆ.

ವಿದೇಶದ ಈ ಐತಿಹಾಸಿಕ ವಾರ್ಷಿಕ ಚಿತ್ರೋತ್ಸವದಲ್ಲಿ ಭಾಗವಹಿಸುತ್ತಿರುವ ಕನ್ನಡದ ಮೊದಲ ಚಿತ್ರ ನಿರ್ದೇಶಕ ಎಂಬ ಹೆಗ್ಗಳಿಕೆಗೆ ನಾಗತಿಹಳ್ಳಿ ಪಾತ್ರವಾಗಿದ್ದಾರೆ. ಮೇ 16 ರಿಂದ 27 ರವರೆಗೂ ಈ ಚಿತ್ರದ ಪ್ರದರ್ಶನ ನಡೆಯಲಿದೆ.

ಈ ಚಿತ್ರೋತ್ಸವಕ್ಕೆ ವಿಶೇಷವಾದ ಹಿನ್ನೆಲೆಯಿದೆ. 1946ರಲ್ಲಿ ಪ್ರಾರಂಭವಾದ ಆರಂಭಗೊಂಡ ಈ ಚಿತ್ರೋತ್ಸವಕ್ಕೆ ಈಗ 60ರ ಸಂಭ್ರಮ. ಈ ಚಿತ್ರೋತ್ಸವದಲ್ಲಿ ದೇಶ-ವಿದೇಶದ ಚಿತ್ರೋದ್ಯಮಿಗಳು, ನಿರ್ದೇಶಕರುಗಳು ಭಾಗವಹಿಸಲಿದ್ದಾರೆ.ಖ್ಯಾತ ನಿರ್ದೇಶಕ ಮಣಿರತ್ನಂ ಈ ಚಿತ್ರೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರ ಅಮೃತಧಾರೆ ಚಿತ್ರ ಅಲ್ಲಿ ಪ್ರದರ್ಶನಗೊಂಡಿದೆ. ಜತೆಗೆ ಸದ್ಯ ನಿರ್ಮಿಸುತ್ತಿರುವ ಮಾತಾಡ್ ಮಾತಾಡ್ ಮಲ್ಲಿಗೆಯ ಡಿವಿಡಿಯೂ ಅಲ್ಲಿ ಮಾರಾಟಕ್ಕೆ ಲಭ್ಯವಿದೆಯಂತೆ.