ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ದಾಮಿನಿ ಪ್ರಕರಣ ಸುಖಾಂತ್ಯ
ಸುದ್ದಿ/ಗಾಸಿಪ್
Feedback Print Bookmark and Share
 
ಸ್ಯಾಂಡಲ್‌ವುಡ್‌ನ ಕನ್ನಡ ನಟಿ ದಾಮಿನಿಯ ತೊಂದರೆ ಈಗ ನಿವಾರಣೆಯಾಗಿದೆ.

ನಿರ್ಮಾಪಕ ನಿರ್ದೇಶಕರು ಹಣ ನೀಡುತ್ತಿಲ್ಲ, ಕಿರುಕುಳ ನೀಡತ್ತಿದ್ದಾರೆ. ಸಮಸ್ಯೆ ಬಗೆಹರಿಸುವ ವರೆಗೆ ಅವರ ಒಪ್ಪಿದ ಚಿತ್ರದಲ್ಲಿ ನಟಿಸೋಲ್ಲ- ಎಂದು ಆಕ್ರೋಶಿಸುತ್ತಿದ್ದ ಧಾಮಿನಿ ಈಗ ಕೂಲ್ ಆಗಿ ಕ್ಯಾಮೆರಾ ಮುಂದೆ ನಿಂತಿದ್ದಾರೆ.

'ಸ್ವತಂತ್ರ ಪಾಳ್ಯ.' ಸಿನಿಮದಲ್ಲಿ ತೊಡಗಿಸಿಕೊಂಡಿರುವ ದಾಮಿನಿಗೆ, ಈ ಚಿತ್ರದ ನಿರ್ದೇಶಕ ವೆಂಕಟೇಶ್ ಹಾಗೂ ನಿರ್ಮಾಪಕರು ಕಿರುಕುಳ ನೀಡುತ್ತಾರೆ, ಸುಮಾರು 1 ಲಕ್ಷ ರೂ. ಸಂಭಾವನೆ ನೀಡಿಲ್ಲ ಎನ್ನುವುದು ಆಕೆಯ ದೂರು.

ಆದರೆ, ಈ ದೂರು ಈಗ ನಿವಾರಣೆಯಾಗಿದೆ.
ರಾಜ್ಯ ಫಿಲ್ಮ್ ಛೇಂಬರ್ ಸಮ್ಮುಖದಲ್ಲಿ ನಡೆದ ಮಾತುಕತೆಯಲ್ಲಿ ಸಂಧಾನ ಯಶಸ್ವಿಯಾಗಿದೆ. ಆಕೆಗೆ 1 ಲಕ್ಷ ರೂ. ನೀಡಲು ನಿರ್ದೇಶಕ ನಿರ್ಮಾಪಕರಿಬ್ಬರೂ ಒಪ್ಪಿಕೊಂಡು, ಅದನ್ನು ಹಸ್ತಾಂತರಿಸಿಯೂ ಆಗಿದೆ.

ಇದೀಗ ಪ್ರಕರಣ ಇತ್ಯರ್ಥವಾಗಿದೆ. ದಾಮಿನಿ ಮತ್ತೆ ಅದೇ ಸಿನಿಮಾ ಮುಗಿಸಿಕೊಡಲು ಒಪ್ಪಿದ್ದಾರೆ. ಸಿನಿಮಾ ಚಿತ್ರೀಕರಣ ಭರದಿಂದ ಸಾಗಿದೆ.