ನಟ ದರ್ಶನ್ ನಾಯಕತ್ವದಲ್ಲಿ ಸಂಗೊಳ್ಳಿ ರಾಯಣ್ಣ ಹೆಸರಿನ ಚಿತ್ರ ಬರುತ್ತಿದೆ. ಕುಟುಂಬ, ದುಬಾಯ್ ಬಾಬು, ಗೌರಮ್ಮ ಚಿತ್ರದ ನಿರ್ದೇಶಕರಾದ ನಾಗಣ್ಣ ಸಂಗೊಳ್ಳಿ ರಾಯಣ್ಣನನ್ನು ನಿರ್ದೇಶಿಸಲಿದ್ದಾರೆ.
ಸದ್ಯದಲ್ಲೆ ಈ ಚಿತ್ರ ಸೆಟ್ಟೇರಲಿದ್ದು, ಆನಂದ್ ಅಪ್ಪುಗೊಡು ಎಂಬುವವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಆನಂದ್, ಈ ಹಿಂದೆ ಓಳು ಬರೀ ಓಳು ಎಂಬ ಚಿತ್ರವೊಂದನ್ನು ನಿರ್ಮಿಸಿದ್ದರು.
ನಿಜ ಹೇಳಬೇಕೆಂದರೆ ಸಂಗೊಳ್ಳಿ ರಾಯಣ್ಣ ಪಾತ್ರವನ್ನು ಅರ್ಜುನ್ ಸರ್ಜಾ ಮಾಡಬೇಕಿತ್ತು. ಆದರೆ ಇತ್ತೀಚಿನ ಮಾಹಿತಿಗಳ ಪ್ರಕಾರ ದರ್ಶನ್ ಸಂಗೊಳ್ಳಿ ರಾಯಣ್ಣನಾಗಿದ್ದಾರೆ.