ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಭಟ್ಟರು ಕೈಬಿಟ್ಟಿದ್ದಕ್ಕೆ ಬೇಸರವಿಲ್ಲ: ಹರಿಪ್ರಿಯಾ! (Diganth | Yograj Bhat | Mungaru Male | Haripriya)
ಸುದ್ದಿ/ಗಾಸಿಪ್
Bookmark and Share Feedback Print
 
MOKSHA
ಯೋಗರಾಜ್ ಭಟ್ ಅವರ ಹೆಸರಿಡದ ಚಿತ್ರಕ್ಕೆ ಆಯ್ಕೆಯಾಗಿದ್ದ ಹರಿಪ್ರಿಯಾ ಅವರನ್ನು ಇದೀಗ ಕೈಬಿಟ್ಟಿರುವುದಾಗಿ ಸ್ವತಃ ಭಟ್ಟರೇ ದೃಢಪಡಿಸಿದ್ದಾರೆ.

'ಕಳ್ಳರ ಸಂತೆ' ಚಿತ್ರದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ಹರಿಪ್ರಿಯಾರನ್ನು ಮೊದಲು ಭಟ್ಟರ ಚಿತ್ರಕ್ಕೆ ಆಯ್ಕೆ ಮಾಡಿಕೊಳ್ಳಲಾಗಿತ್ತು. ಈ ಚಿತ್ರದಲ್ಲಿ ಪ್ರಿಯಾಳಿಗೆ ದಿಗಂತ್ ಜೊತೆಗೆ ನಟಿಸುವ ಅವಕಾಶ ಸಿಕ್ಕಂತಾಗಿತ್ತು.

ಆದರೆ, ನೀವೇ ನಮ್ಮ ಚಿತ್ರದ ನಾಯಕಿ ಎಂದು ಆಸೆ ಹುಟ್ಟಿಸಿದ ಭಟ್ಟರು, ಇದೀಗ ಪ್ರಿಯಾಳ ವಿಷಯದಲ್ಲಿ ತಮ್ಮ ಮನಸ್ಸು ಬದಲಿಸಿದ್ದಾರೆ. ಕತೆ ಬದಲಾಗಿದ್ದು ಆ ಕತೆಗೆ ಹರಿಪ್ರಿಯಾ ಹೊಂದಿಕೆಯಾಗುವುದಿಲ್ಲ ಹಾಗಾಗಿ ಅವರನ್ನು ಈ ಚಿತ್ರಕ್ಕೆ ನಾಯಕಿಯನ್ನಾಗಿ ಮಾಡಿಕೊಳ್ಳುವುದಿಲ್ಲ. ನನ್ನ ಮುಂದಿನ ಚಿತ್ರಕ್ಕೆ ಖಂಡಿತವಾಗಿಯೂ ಪ್ರಿಯಾಳನ್ನು ಆಯ್ಕೆ ಮಾಡಿಕೊಳ್ಳುತ್ತೇನೆ ಎಂದು ಭಟ್ಟರು ಸಮಜಾಯಿಷಿ ನೀಡುತ್ತಿದ್ದಾರೆ.

ಇದರಿಂದ ನನಗೇನೂ ಬೇಸರವಿಲ್ಲ. ಇದೀಗ ನನಗೂ ಆಫರ್‌‌ಗಳು ಬರುತ್ತಿದ್ದು, ಇದರ ಬಗ್ಗೆ ತಲೆಕೆಡಿಸಿಕೊಳ್ಳುವಷ್ಟು ಪುರುಸೊತ್ತು ನನಗಿಲ್ಲ ಎಂದು ಒಲ್ಲದ ಮನಸ್ಸಿನಿಂದ ಹರಿಪ್ರಿಯಾ ಹೇಳುತ್ತಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಹರಿಪ್ರಿಯಾ, ಯೋಗರಾಜ ಭಟ್, ಕಳ್ಳರ ಸಂತೆ, ಕನ್ನಡ ಸಿನಿಮಾ