ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಘರ್ಜನೆ ನಿಲ್ಲಿಸಿದ ಸಾಹಸ ಸಿಂಹನ ಅಂತಿಮ ದರ್ಶನ (Vishnuvardhan No More | Kannada Film Actor | Vishnu Sena | Kannada Cinema Artist)
ಸುದ್ದಿ/ಗಾಸಿಪ್
Bookmark and Share Feedback Print
 
WD
ಹೃದಯಾಘಾತದಿಂದ ಬುಧವಾರ ನಸುಕಿನ ವೇಳೆ ಅಸ್ತಂಗತರಾದ ಕನ್ನಡದ ಮೇರು ನಟ ಡಾ. ವಿಷ್ಣುವರ್ಧನ್ ಅವರ ಪಾರ್ಥಿವ ಶರೀರವನ್ನು ನಗರದ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದ ಆವರಣದಲ್ಲಿ ಇರಿಸಲಾಗಿದ್ದು, ಅಂತಿಮ ದರ್ಶನಕ್ಕೆ ಕಿಕ್ಕಿರಿದ ಜನಸಾಗರ ಹರಿದು ಬರುತ್ತಿದ್ದು, ಸಾಹಸ ಸಿಂಹನ ಅಭಿಮಾನಿಗಳನ್ನು ನಿಭಾಯಿಸಲು ಪೊಲೀಸರು ಹರ ಸಾಹಸ ಮಾಡುತ್ತಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ವಿರೋಧ ಪಕ್ಷದ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್, ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಖ್ಯಾತ ನಟ ಪ್ರಕಾಶ್ ರೈ, ಆಪ್ತಮಿತ್ರ ಅಂಬರೀಶ್, ಸರೋಜಾದೇವಿ ಸೇರಿದಂತೆ ಚಿತ್ರರಂಗದ ಗಣ್ಯರು, ರಾಜಕೀಯ ಮುಖಂಡರು ವಿಷ್ಣು ಅವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿ ಸಂತಾಪ ಸೂಚಿಸಿದರು.

ಮತ್ತೊಂದೆಡೆ ಮೈದಾನದ ಕಡೆಗೆ ಧಾವಿಸುತ್ತಿರುವ ವಿಷ್ಣು ಅಭಿಮಾನಿಗಳು ಸುಖಾ ಸುಮ್ಮನೆ ರಸ್ತೆಯಲ್ಲಿ ಸಾಗುವ ಸಾಮಾನ್ಯ ಜನತೆಗೆ ತೊಂದರೆ ಮಾಡುವ ಸಾಹಸಕ್ಕೆ ಇಳಿಯುತ್ತಿದ್ದಾರೆ. ನಗರದ ಹಲವೆಡೆ ಸರ್ಕಾರಿ ಬಸ್ಸುಗಳಿಗೆ ಕಲ್ಲು ತೂರಾಟ ನಡೆಸಿದ ವರದಿಗಳಾಗಿದೆ.

ಕೆಲವೇ ಗಂಟೆಗಳ ಹಿಂದೆ ವಿಷ್ಣು ಅವರ ಪ್ರಾರ್ಥಿವ ಶರೀರವನ್ನು ಅವರ ನಿವಾಸವಿರುವ ಜಯನಗರದ ನಾಲ್ಕನೇ ಟಿ ಬ್ಲಾಕ್‌ನಿಂದ 3ನೇ ಬ್ಲಾಕ್, ಆನೆ ಬಂಡೆ ರಸ್ತೆ, ಸೌತ್ ಎಂಡ್ ಸರ್ಕಲ್, ಬಸವನಗುಡಿ ಮಾರ್ಗದ ಮೂಲಕ ನ್ಯಾಷನಲ್ ಕಾಲೇಜು ಮೈದಾನಕ್ಕೆ ಕರೆತರಲಾಯಿತು. ಸಂಜೆ ವಿಷ್ಣು ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ವಿಷ್ಣುವರ್ಧನ್, ಕನ್ನಡ ಸಿನಿಮಾ, ಯಡಿಯೂರಪ್ಪ