ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ತಮ್ಮನಂತೆ ಅಣ್ಣ: ಜಾಹಿರಾತಿಗೂ ಲಗ್ಗೆಯಿಟ್ಟ ಶಿವಣ್ಣ (Shivanna | Kalyan Jewellers | Puneeth)
ಸುದ್ದಿ/ಗಾಸಿಪ್
Bookmark and Share Feedback Print
 
MOKSHA
ಟಿವಿ ಆಯ್ತು, ಚಿತ್ರ ರಂಗದಲ್ಲಿ ಹೆಸರು ಮಾಡಿ ಆಗಿದೆ. ಈಗ ಜಾಹೀರಾತು ಕ್ಷೇತ್ರಕ್ಕೂ ಶಿವಣ್ಣ ಪಾದಾರ್ಪಣೆ ಮಾಡಿದ್ದಾರೆ. ಜಾಹೀರಾತು ಕ್ಷೇತ್ರವನ್ನು ಕನ್ನಡದ ನಾಯಕರು ಇಷ್ಟ ಪಟ್ಟಿದ್ದು ಬಹಳ ಕಡಿಮೆ. ಸಂದೇಶ ಸಾರುವ ಕೆಲ ಜಾಹೀರಾತಿನಲ್ಲಿ ಬಂದು ಹೋಗಿದ್ದು ಬಿಟ್ಟರೆ ಇಲ್ಲೇ ಹೆಚ್ಚಾಗಿ ಕಾಣಿಸಿಕೊಂಡಿಲ್ಲ. ಆದರೆ ಇತ್ತೀಚೆಗೆ ಟ್ರೆಂಡ್ ಬಹಳ ಬದಲಾಗುತ್ತಿದೆ. ಪುನಿತ್ ರಾಜ್ ಕುಮಾರ್ ಸಾಕಷ್ಟು ಜಾಹೀರಾತುಗಳಿಗೆ ರೂಪದರ್ಶಿ. ಇದೀಗ ಅವರ ಹಾದಿಯನ್ನು ಅವರಣ್ಣ ಶಿವಣ್ಣನೂ ತುಳಿದಿದ್ದಾರೆ.

ಸಹೋದರ ಏಕಕಾಲಕ್ಕೆ ಎರಡು ಚಿನ್ನದ ಸಂಸ್ಥೆಗೆ ರೂಪದರ್ಶಿಯಾಗಿರುವಾಗ ಅವರಣ್ಣ ನಾನು ಒಂದಕ್ಕೂ ಇಲ್ಲ ಅಂದರೆ ಹೇಗೆ ಅನ್ನುವ ಕಾರಣಕ್ಕೋ ಅಥವಾ ಜಾಹೀರಾತುದಾರರ ಆಫರ್‌ಗೋ ಮಣಿದು ಅವರೀಗ ಜಾಹೀರಾತು ಕ್ಷೇತ್ರಕ್ಕೆ ಕಾಲಿರಿಸಿದ್ದಾರೆ.

ತಮ್ಮನ ಹಾಗೆ ಅಣ್ಣನೂ ಒಪ್ಪಿದ್ದು ಚಿನ್ನದ ಜಾಹಿರಾತಿಗೇ. ಕರ್ನಾಟಕದಲ್ಲಿ ದೊಡ್ಡ ಪ್ರಮಾಣದಲ್ಲಿ ನೆಲೆ ಕಂಡುಕೊಳ್ಳಲು ಯತ್ನಿಸುತ್ತಿರುವ ಕಲ್ಯಾಣ್ ಜ್ಯುವೆಲ್ಲರ್ಸ್‌ಗೆ ಇವರೀಗ ರಾಯಭಾರಿ. ಈ ಉತ್ಪನ್ನದ ಜಾಹೀರಾತಿನಲ್ಲಿ ಇವರು ಇನ್ನು ಮುಂದೆ ಕಾಣಿಸಿಕೊಳ್ಳಲಿದ್ದಾರೆ. ಕೇರಳ ಹಾಗೂ ತಮಿಳುನಾಡಿನಲ್ಲಿ ಈಗಾಗಲೇ ಸಾಕಷ್ಟು ಜನಪ್ರಿಯತೆ ಗಳಿಸಿರುವ ಕಲ್ಯಾಣ್ ಜ್ಯುವೆಲ್ಲರ್ಸ್ ಉತ್ಪನ್ನ ಇನ್ನು ರಾಜ್ಯದ ಚಿನ್ನಾಭರಣ ಪ್ರೇಮಿಗಳನ್ನೂ ಆಕರ್ಷಿಸಲಿದೆ. ಎರಡು ರಾಜ್ಯದಲ್ಲಿ ಒಟ್ಟು 19 ಶಾಖೆ ಹೊಂದಿರುವ ಸಂಸ್ಥೆ ಕರ್ನಾಟಕದಲ್ಲಿ ಹೊಸದಾಗಿ 11 ಶಾಖೆ ತೆರಯಲು ನಿರ್ಧರಿಸಿದೆ.

ಇದನ್ನು ಖುದ್ದು ಸಂಸ್ಥೆಯ ಮಾಲೀಕ ಕಲ್ಯಾಣ್ ರಮಣ ತಿಳಿಸಿದ್ದಾರೆ. ಸೆ.26ರಂದ ನಗರದ ಡಿಕನ್ಸ್ನ್ ರಸ್ತೆಯಲ್ಲಿ ಸಂಸ್ಥೆಯ ಮೊದಲ ಮಳಿಗೆ ಉದ್ಘಾಟನೆ ಆಗಲಿದೆ. ಆ ಸಮಾರಂಭದಲ್ಲಿ ಶಿವರಾಜ್ ಕುಮಾರ್ ಸಹ ಉಪಸ್ಥಿತರಿರುತ್ತಾರೆ. ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವ ಕನ್ನಡದ ಜನಪ್ರಿಯ ನಟ ನಮ್ಮ ಉತ್ಪನ್ನ ರಾಯಭಾರಿಯಗಿ ಲಭಿಸಿರುವುದು ಸಂತಸ ತಂದಿದೆ. ನಿಜಕ್ಕೂ ಇದು ನಮ್ಮ ಪಾಲಿನ ಸುಕೃತ ಎನ್ನುತ್ತಾರೆ ಅವರು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಶಿವರಾಜು ಕುಮಾರ್, ಕಲ್ಯಾಣ್ ಜುವೆಲ್ಲರ್ಸ್, ಪುನೀತ್