ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಮೇಲುಕೋಟೆಯಲ್ಲೀಗ ಆಡೂ ಆಟ ಆಡು (Melukote | Adu Aata Aadu | Jagan)
ಸುದ್ದಿ/ಗಾಸಿಪ್
Bookmark and Share Feedback Print
 
ಮೇಲುಕೋಟೆಯಲ್ಲೀಗ ಆಡೂ ಆಟ ಆಡು ಚಿತ್ರದ ಶೂಟಿಂಗ್ ಭರದಿಂದ ಸಾಗಿದೆ. ಇದೊಂದು ಖಾಯಂ ಶೂಟಿಂಗ್ ಸ್ಪಾಟ್ ಆಗಿ ಜನಪ್ರಿಯವಾಗಿದ್ದು, ಇದೀಗ ಇಲ್ಲಿ ಒಂದಲ್ಲಾ ಒಂದು ಚಿತ್ರದ ಶೂಟಿಂಗ್ ನಡೆಯುತ್ತಲೇ ಇರುತ್ತದೆ. ಸದ್ಯ ಈಗ ಆಡೂ ಆಟ ಆಡು ಚಿತ್ರದ್ದೇ ಕಾರುಬಾರು. ಇದೀಗ ದೇವಸ್ಥಾನದ ಆವರಣದ ತುಂಬಾ ಚಿತ್ರ ತಂಡದ್ದೇ ಓಡಾಟ ಕಾಣಸಿಗುತ್ತಿದೆ. ಕೊಂಚ ಮಳೆ ತಡೆಯಾಗಿದ್ದು, ಶೂಟಿಂಗ್ ಕಾರ್ಯ ನಿಂತು ನಿಂತು ಸಾಗುತ್ತಿದೆ.

ಉಪೇಂದ್ರ ಅಭಿನಯದ ಬುದ್ದಿವಂತ ಚಿತ್ರವನ್ನು ನಿರ್ದೇಶಿಸಿದ್ದ ರಾಮನಾಥ್ ಋಗ್ವೇದಿ ಈ ಚಿತ್ರದ ನಿರ್ದೇಶಕರು. ಇದೊಂದು ತಮಿಳಿನ ರಿಮೇಕ್ ಚಿತ್ರವಾಗಿದ್ದು ಈಗಾಗಲೇ ಬೆಂಗಳೂರು, ಮೈಸೂರು, ಮಲೇಷ್ಯಾದಲ್ಲಿ ಶೂಟಿಂಗ್ ಮುಗಿಸಿ ಇಲ್ಲಿಗೆ ಬಂದಿದೆ. ಇದು ಅಂತಿಮ ಹಂತದ ಚಿತ್ರೀಕರಣವಾಗಿದ್ದು, ಚಿತ್ರದ ನಾಯಕ ಜಗನ್ ಹಾಗೂ ನಾಯಕಿ ಶ್ರುತಿ ಪ್ರಕಾಶ್ ಅಭಿನಯದ ಒಂದು ಹಾಡಿನ ಶೂಟಿಂಗ್ ಆಗಬೇಕಿದೆ.

ಇಲ್ಲಿನ ದೇವಾಲಯ ಆವರಣ, ಅಕ್ಕತಂಗಿ ಕೊಳ ಸೇರಿದಂತೆ ಹಲವೆಡೆ ಹಾಡಿನ ಶೂಟಿಂಗ್ ನಡೆಯುತ್ತಿದೆ. ಮಳೆಯ ಕಾರಣ ಎರಡು ದಿನಕ್ಕೆ ಮುಗಿಯಬೇಕಿದ್ದ ಶೂಟಿಂಗ್ ನಾಲ್ಕನೇ ದಿನ ದಾಟಿದೆ.

ಜಗನ್ ಮಾತನಾಡುತ್ತಾ, ಚಿತ್ರದ 70ರಿಂದ 80 ಭಾಗ ಚಿತ್ರೀಕರಣ ಮುಗಿದು ಹೋಗಿದೆ. ಚಿತ್ರೀಕರಣ ಯಶಸ್ವಿಯಾಗಿ ಸಾಗಿದ್ದು, ಉತ್ತಮ ಚಿತ್ರ ನೋಡುಗರಿಗೆ ಲಭ್ಯವಾಗಲಿದೆ ಎಂದಿದ್ದಾರೆ. ಅದೇ ರೀತಿ ನಾಯಕಿ ಶ್ರುತಿ ಮಾತನಾಡುತ್ತಾ ಇದೊಂದು ಮದುವೆ ಸನ್ನಿವೇಶದಲ್ಲಿ ಕಂಡು ಬರುವ ಹಾಡಿನ ಚಿತ್ರೀಕರಣ. ಒಳ್ಳೆ ಸೆಟ್ ಹಾಕಲಾಗಿದೆ. ಆದರೆ ಮಳೆ ಕೊಂಚ ತೊಡಕಾಗಿ ಕಾಡಿದೆ. ಆದರೂ ಶೂಟಿಂಗ್ ಮಜ ಕೊಟ್ಟಿತು ಎನ್ನುತ್ತಾರೆ.

ಚಿತ್ರಕ್ಕೆ ಪಿ.ಎನ್. ರವಿ ಕ್ಯಾಮರಾ ಹಿಡಿದಿದ್ದಾರೆ. ವಿ. ಮನೋಹರ್ ಸಂಗೀತ ನೀಡಿದ್ದಾರೆ. ತಬಲಾ ನಾಣಿ, ಜೈಜಗದೀಶ್ ಸೇರಿದಂತೆ ಸಾಕಷ್ಟು ಹಿರಿಯ ನಟರು ಚಿತ್ರದಲ್ಲಿದ್ದಾರೆ. ಡಿಸೆಂಬರ್ ವೇಳೆಗೆ ಚಿತ್ರ ತೆರೆಗೆ ಬರಬಹುದು ಅನ್ನಲಾಗುತ್ತಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಮೇಲುಕೋಟೆ, ಆಡು ಆಟ ಆಡು, ಜಗನ್