ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ನಾರಿಯ ಸೀರೆ ಕದ್ದದ ಹೀರೋ ನಾನಲ್ಲ: ರವಿಚಂದ್ರನ್! (Naariya Seere Kadda | Naveen Krishna | Harshika Poonacha | Ravichandran)
ಸುದ್ದಿ/ಗಾಸಿಪ್
Bookmark and Share Feedback Print
 
PR
ರವಿಚಂದ್ರನ್ ಇದೀಗ ನೇರವಾಗಿ ನಿರ್ಮಾಪಕರ ಮೇಲೆ ಹರಿಹಾಯ್ದಿದ್ದಾರೆ. ನಾರಿಯ ಸೀರೆ ಕದ್ದ ಚಿತ್ರದಲ್ಲಿ ಹೀರೋ ನಾನಲ್ಲವಾದರೂ, ಕೇವಲ ನನ್ನನ್ನೇ ಚಿತ್ರದಲ್ಲಿ ನಾಯಕ ಎಂದು ನಿರ್ಮಾಪಕರು ಬಿಂಬಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಇದೇನಪ್ಪಾ ಹೊಸ ವಿಷ್ಯ ಅಂತ ಗಾಬರಿ ಆಯ್ತಾ? ಹೌದು. ರವಿಚಂದ್ರನ್ ಈ ಚಿತ್ರದ ರಿಯಲ್ ಹೀರೋ ಅಲ್ಲವಂತೆ. ವಿಶೇಷ ಪಾತ್ರದಲ್ಲಿ ಮಾತ್ರ ನಟಿಸಿದ್ದಾರಂತೆ. ಉಳಿದಂತೆ ಚಿತ್ರದ ಪ್ರಮುಖ ನಾಯಕ ನಟ ನವೀನ್ ಕೃಷ್ಣ. ನಾಯಕಿ ಹರ್ಷಿಕಾ ಪೂಣಚ್ಚ. ಆದರೆ ಚಿತ್ರ ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವ ಫೋಟೋಗಳೆಲ್ಲವುಗಳಲ್ಲಿಯೂ ರವಿಚಂದ್ರನ್ ಹಾಗೂ ನಿಖಿತಾ ಜೋಡಿಯೇ ಕಾಣುತ್ತದೆ.

ಹಾಗಾಗಿ ಸಹಜವಾಗಿಯೇ ರವಿಚಂದ್ರನ್ ಹಾಗೂ ನಿಖಿತಾ ನಾಯಕ ನಾಯಕಿಯರೆಂದು ಸಹಜವಾಗಿಯೇ ಬಿಂಬಿತರಾಗಿದ್ದಾರೆ. ನಿರ್ಮಾಪಕರೂ ಕೂಡಾ ಸತ್ಯವನ್ನು ಎಲ್ಲೂ ಬಿಚ್ಚಿಟ್ಟಿರಲಿಲ್ಲ. ಇದೀಗ ನೇರವಾಗಿ ರವಿಚಂದ್ರನ್ ಅವರೇ ಹೇಳಿದ್ದಾರೆ.

MOKSHA
ರವಿಚಂದ್ರನ್ ಸ್ವತಃ ಮಾತನಾಡುತ್ತಾ, ನಿಜವಾಗಿಯೂ ಚಿತ್ರದ ರಿಯಲ್ ನಾಯಕ ನಾನಲ್ಲ. ನಾನು ಈ ಚಿತ್ರಕ್ಕಾಗಿ ಪ್ರಾಮಾಣಿಕವಾಗಿ ಹೇಳೋದಾದರೆ ಕೇವಲ 12 ದಿನ ಕೆಲಸ ಮಾಡಿದ್ದೇನೆ. ನವೀನ್ ಕೃಷ್ಣ ಹಾಗೂ ಹರ್ಷಿಕಾ ಈ ಚಿತ್ರದ ಮುಖ್ಯ ಪಾತ್ರಧಾರಿಗಳು. ಆದರೆ ಅವರನ್ನು ಸ್ವತಃ ನಿರ್ಮಾಪಕರೇ ತುಂಬ ನಿರ್ಲಕ್ಷಿಸಿದ್ದಾರೆ. ಇದರಿಂದ ನನಗೆ ತುಂಬಾ ಬೇಸರವಾಗಿದೆ. ನನಗಂತೂ ಪಬ್ಲಿಸಿಟಿ ಬೇಡ. ನನಗ ಅದು ಸಾಕಷ್ಟಿದೆ. ಆದರೆ ಯುವ ನಟರಾದ ಅವರಿಗೆ ಪಬ್ಲಿಸಿಟಿಯ ಅವಶ್ಯಕತೆ ಇದೆ. ಅವರು ಪ್ರತಿಭಾವಂತರು. ಆದರೆ ಅವರನ್ನು ಇಲ್ಲಿ ನಿರ್ಲಕ್ಷಿಸಿದ್ದು ತುಂಬ ಬೇಸರ ತಂದಿದೆ. ವಿಚಿತ್ರವೆಂದರೆ, ನನ್ನನ್ನೇ ಹೀರೋ ಥರ ಚಿತ್ರದ ಪೋಸ್ಟರ್‌ಗಳಲ್ಲಿ ಯಾಕೆ ಬಿಂಬಿಸಿದ್ದಾರೋ ಗೊತ್ತಿಲ್ಲ ಎಂದಿದ್ದಾರೆ.

ಇನ್ನಷ್ಟು ಫೋಟೋಗಳಿಗಾಗಿ ಮುಂದೆ ಕ್ಲಿಕ್ ಮಾಡಿ...

 
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ರವಿಚಂದ್ರನ್, ನಾರಿಯ ಸೀರೆ ಕದ್ದ, ನವೀನ್ ಕೃಷ್ಣ, ಹರ್ಷಿಕಾ ಪೂಣಚ್ಚ