ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ವಿಷ್ಣುವರ್ಧನ್ ಹೆಸರು ಪಡೆದೇ ತೀರುತ್ತೇನೆ: ದ್ವಾರಕೀಶ್ (Dwarakish | Sudeep | Vishnuvardhan)
ಸುದ್ದಿ/ಗಾಸಿಪ್
Bookmark and Share Feedback Print
 
PR
ಹಿರಿಯ ನಟ, ನಿರ್ದೇಶಕ, ನಿರ್ಮಾಪಕ ದ್ವಾರಕೀಶ್ ತನ್ನ ಪಟ್ಟು ಬಿಟ್ಟಿಲ್ಲ. ಯಾವುದೇ ಕಾರಣಕ್ಕೂ ತಾನು ವಿಷ್ಣುವರ್ಧನ್ ಹೆಸರಿನ ಚಿತ್ರ ಮಾಡುವ ಯೋಜನೆಯಿಂದ ಹಿಂದೆ ಸರಿಯುವುದಿಲ್ಲ ಎಂದಿದ್ದಾರೆ. ಆ ಮೂಲಕ ವಿವಾದದಿಂದ ಹಿಂದೆ ಸರಿಯುವ ತೀರ್ಮಾನವನ್ನೇ ನಾನು ಮಾಡುವುದಿಲ್ಲ ಎಂಬ ಠೇಂಕಾರವನ್ನು ಮತ್ತೆ ಮೊಳಗಿಸಿದ್ದಾರೆ.

ನನ್ನ ಚಿತ್ರಕ್ಕೆ ವಿಷ್ಣುವರ್ಧನ್ ಎಂಬ ಹೆಸರನ್ನು ಪಡೆದೇ ತೀರುತ್ತೇನೆ. ಹಾಗೆ ನೋಡಿದರೆ, ನಟ ವಿಷ್ಣುವರ್ಧನ್ ಅವರ ನಿಜವಾದ ಹೆಸರು ವಿಷ್ಣುವರ್ಧನ್ ಅಲ್ಲ. ಅವರ ಮೂಲಕ ಹೆಸರು ಸಂಪತ್ ಕುಮಾರ್. ಸಂಪತ್ ಕುಮಾರ್ ಎಂಬ ಹೆಸರಿನಲ್ಲೇ ಅವರ ಎಲ್ಲ ದಾಖಲೆಗಳೂ, ಬ್ಯಾಂಕ್ ಅಕೌಂಟ್ ಎಲ್ಲವೂ ಇದೆ. ವಿಷ್ಣುವರ್ಧನ್ ಎಂಬ ಹೆಸರು ಎಲ್ಲೂ ಇಲ್ಲ. ನಾಗರಹಾವಿನ ಸಂದರ್ಭ ಪುಟ್ಟಣ್ಣ ಕಣಗಾಲ್ ಸಂಪತ್‌ಗೆ ಇಟ್ಟ ಹೆಸರು ವಿಷ್ಣುವರ್ಧನ್. ಹಾಗಾಗಿ ಅವರಿಗೆ ಆ ಹೆಸರು ಬಂತು ಎಂದು ದ್ವಾರಕೀಶ್ ಹೇಳಿದ್ದಾರೆ.

ನಾನು ಈ ಹೆಸರನ್ನು ನನ್ನ ಚಿತ್ರಕ್ಕೆ ಇಡುವ ಮೂಲಕ ವಿವಾದ ಸೃಷ್ಟಿಸಲು ಬಯಸಿಲ್ಲ. ನನ್ನ ಆತ್ಮೀಯ ಗೆಳೆಯ ಅವನು. ಅವನ ಹೆಸರಿಗೆ ಖಂಡಿತ ಮಸಿ ಬಳಿವ ಕಾರ್ಯ ಮಾಡಲ್ಲ. ಆದರೆ ವಿಷ್ಣುವರ್ಧನ ಹೆಸರು ಅವರೊಬ್ಬರದೇ ಅಲ್ಲ. ಹೊಯ್ಸಳ ವಂಶದ ರಾಜ ಕೂಡಾ ವಿಷ್ಣುವರ್ಧನನೇ ಎಂದು ಅವರು ತಮ್ಮ ನಡೆಯನ್ನು ಸಮರ್ಥಿಸಿಕೊಂಡರು.

ಈ ವಿಚಾರ ಇಲ್ಲೇ ಇತ್ಯರ್ಥವಾಗದಿದ್ದರೆ, ಖಂಡಿತ ಕೋರ್ಟಿಗೆ ಹೋಗುತ್ತೇನೆ. ವಿಷ್ಣುವರ್ಧನ ಹೆಸರನ್ನು ಪಡೆದೇ ತೀರುತ್ತೇನೆ. ಖಂಡಿತವಾಗಿಯೂ ನಾನು ಈ ಚಿತ್ರದ ಮೂಲಕ ವಿಷ್ಣು ಅಭಿಮಾನಿಗಳನ್ನು ತೃಪ್ತಿಪಡಿಸುತ್ತೇನೆ ಎಂದರು.

ಸುದೀಪ್ ಮುಖ್ಯಪಾತ್ರದಲ್ಲಿರುವ ಈ ಚಿತ್ರ ಈಗಾಗಲೇ ಶೂಟಿಂಗ್ ನಡೆಸುತ್ತಿದ್ದು, 2011ರ ಫೆಬ್ರವರಿ ತಿಂಗಳಲ್ಲಿ ಬಿಡುಗಡೆಗೊಳ್ಳಲಿದೆ ಎಂದು ದ್ವಾರಕೀಶ್ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ದ್ವಾರಕೀಶ್, ವಿಷ್ಣುವರ್ಧನ, ಸುದೀಪ್