ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಡಬ್ಬದಿಂದ ಶೀಘ್ರವೇ ಹೊರಬರಲಿದೆ ಒಲವೇ ಮಂದಾರ (Olave Mandara | Shrikanth | Kannada Cinema)
ಸುದ್ದಿ/ಗಾಸಿಪ್
Bookmark and Share Feedback Print
 
ಒಲವೇ ಮಂದಾರ ಎಂಬ ಹೊಸ ಚಿತ್ರ ಸ್ಯಾಂಡಲ್‌ವುಡ್‌ನಲ್ಲಿ ಸಿದ್ಧವಾಗುತ್ತಿದೆ. ಜನರಿಗೆ ಉತ್ತಮ ಸಂದೇಶ ಬೀರುವ ಸಲುವಾಗಿಯೇ ಈ ಚಿತ್ರ ಮಾಡಲಾಗುತ್ತಿದೆಯಂತೆ.

ಈ ಚಿತ್ರದ ಶೂಟಿಂಗ್ ಶುರುವಾಗಿ ಒಂದೂವರೆ ವರ್ಷ ಕಳೆದಿದೆ. ಮಳೆಗಾಲ, ಚಳಿಗಾಲ ಹಾಗೂ ಬೇಸಿಗೆ ಕಾಲ ಈ ಮೂರೂ ಋತುವನ್ನೂ ಚಿತ್ರದಲ್ಲಿ ಸಮರ್ಪಕವಾಗಿ ತೋರಿಸಬೇಕಿರುವುದರಿಂದ ಚಿತ್ರದ ಚಿತ್ರೀಕರಣ ನಿಧಾನವಾಗಿ ಸಾಗಿದೆ ಎನ್ನಲಾಗುತ್ತಿದೆ.

ಸದ್ಯ ಅಬ್ಬಾಯಿ ನಾಯ್ಡು ಸ್ಟುಡಿಯೋದಲ್ಲಿ ವಿಶೇಷ ಸೆಟ್ ಹಾಕಿ ಚಿತ್ರದ ಹಾಡಿನ ಶೂಟಿಂಗ್ ನಡೆಸಲಾಗುತ್ತಿದೆ. ಈ ಹಾಡು ಪರಿಸರ ಜಾಗೃತಿಯನ್ನು ಜನರಲ್ಲಿ ಮೂಡಿಸುವ ಹಾಡಾಗಿದೆ. ಗಿಡ, ಮರ, ಚಿಟ್ಟೆ, ಹೂವಿಗೂ ಜೀವ ಇದೆ ಎನ್ನುವುದನ್ನು ತೋರಿಸುವ ರೀತಿ ಹಾಡನ್ನು ಶೂಟ್ ಮಾಡಲಾಗಿದೆಯಂತೆ. ಈ ಗಿಡಮರಗಳ ಹಾಡಿಗೆ ಮುರಳಿ ನೃತ್ಯ ನಿರ್ದೇಶನ ಮಾಡಿದ್ದಾರೆ.

ಜಯತೀರ್ಥ ಅವರ ನಿರ್ದೇಶನ ಚಿತ್ರಕ್ಕಿದೆ. ಹಾಡಿಗೆ ಹಿನ್ನೆಲೆಯಾಗಿ ಬಿ.ಕೆ.ಎಸ್ ವರ್ಮ ಅವರ ಪುತ್ರ ಪ್ರದೀಪ್ ವರ್ಮರ ಕೈಚಳಕ ಇದೆ. ಈ ಚಿತ್ರದ ಮೂಲಕ ಈ ಒಂದು ಹೊಸ ಪ್ರತಿಭೆಯ ಅನಾವರವೂ ಆಗುತ್ತಿದೆ.

ಶ್ರೀಕಾಂತ್ ನಾಯಕ ನಟ. ಇವರ ಮೊದಲ ಚಿತ್ರ ಇದು. ಇವರು ಹಾಡಿಗೆ ಹೆಜ್ಜೆ ಹಾಕಿಲ್ಲ. ಬದಲಾಗಿ ಒಂದು ಮರವಾಗಿ ನಿಲ್ಲುತ್ತಾರೆ. ಇದೇ ರೀತಿ ಚಿತ್ರದ ಪ್ರತಿ ಪಾತ್ರವನ್ನೂ ಒಂದು ಸಂಕೇತ ರೂಪದಲ್ಲಿ ತೋರಲಾಗಿದೆ. ಚಿತ್ರಕ್ಕೆ ಲೇಸರ್ ಲೈಟ್ ಬಳಸಲಾಗಿದ್ದು, ಒಂದು ವಿಶಿಷ್ಟತೆಯನ್ನು ಇದೂ ತಂದುಕೊಡಲಿದೆಯಂತೆ. ಚಿತ್ರದಲ್ಲಿ ಏಳು ಹಾಡುಗಳಿವೆ. ದೇವ ಸಂಗೀತ ನಿರ್ದೇಶನ ಚಿತ್ರಕ್ಕಿದೆ. ಚಿತ್ರದ ನಿರ್ಮಾಣ ಬಹುತೇಕ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ತೆರೆಗಪ್ಪಳಿಸಲಿದೆ. ಕಾದು ನೋಡೋಣ ಬಿಡಿ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಒಲವೇ ಮಂದಾರ, ಶ್ರೀಕಾಂತ್, ಕನ್ನಡ ಸಿನಿಮಾ