ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಕಿರುಬನಂತೆ ಕಾಡಿನಲ್ಲಿ ಅಲೆಯಲಿರುವ 'ಆ ದಿನಗಳ' ಸತ್ಯ (Satya | Aa Dinagalu | Dayashankar | Purushotham)
ಸುದ್ದಿ/ಗಾಸಿಪ್
Bookmark and Share Feedback Print
 
PR
'ಆ ದಿನಗಳ'ಲ್ಲಿ ಸರ್ದಾರ್ ಆಗಿ ಮಿಂಚಿ, 'ಸ್ಲಂ ಬಾಲ'ನಿಗೆ ಜೊತೆಯಾಗಿ 'ರಾಜಧಾನಿ'ಯಲ್ಲಿ ಗಮನ ಸೆಳೆದ ಸತ್ಯ 'ಗುಂಡ್ರುಗೋವಿ'ಯಾಗಿ ಒಂದಷ್ಟು ಗುಡುಗಿದ್ದು ಸ್ಯಾಂಡಲ್‌ವುಡ್ ಮಂದಿಗೆ ತಿಳಿದಿದೆ. ಇದೀಗ, ಅವರು 'ಕಿರುಬ'ನ ಥರಾ ಕಾಡು ಅಲೆಯಲಿದ್ದಾರಂತೆ.

ಅಂದರೆ, ಇನ್ನೂ ಹೆಸರಿಡ ಚಿತ್ರವೊಂದಕ್ಕೆ ಸತ್ಯ ನಾಯಕ. ಇದು ಕಾಡು ಹುಡುಗನೊಬ್ಬನ ಕಥೆ. ನಾಯಕ ಇಲ್ಲಿ ಪಕ್ಕಾ ಒರಟ. ಒಂದು ರೀತಿ ಕಾಡು ಮನುಷ್ಯ. ಕಾಡಿನ ಕಥೆಯಾದರೂ, ನವಿರಾದ ಪ್ರೀತಿ ಇಲ್ಲಿದೆ. ಒಂದೇ ಮಾತಲ್ಲಿ ಹೇಳಬೇಕಾದರೆ ಆಕ್ಷನ್ ಹಾಗೂ ಲವ್ ಸ್ಟೋರಿ ಚಿತ್ರದ ಪ್ರಮುಖ ಅಂಶ. ಅರ್ಪಣಾ ಪ್ರಭು ಹಾಗೂ ಮತ್ತೊಬ್ಬರು ನಾಯಕಿಯಾಗಿ ಅಭಿನಯಿಸಲಿದ್ದಾರೆ. ಅಂದಮೇಲೆ ಇದೊಂದು ತ್ರಿಕೋನ ಪ್ರೇಮ ಕಥೆ.

ನಿನಾಸಂ ಅಶ್ವಥ್ ಇಲ್ಲಿ ಖಳಪಾತ್ರದಲ್ಲಿ ನಟಿಸಲಿದ್ದಾರೆ. ದಯಾಶಂಕರ್ ಈ ಚಿತ್ರದ ಮೂಲಕ ನಿರ್ದೇಶಕ ಪಟ್ಟ ವಹಿಸಲಿದ್ದಾರೆ. ಆದರೆ ಹಾಗಂತ ಇವರು ಗಾಂಧಿನಗರಕ್ಕೆ ಹೊಸಬರಲ್ಲ. ಹಲವು ಚಿತ್ರಗಳಲ್ಲಿ ಕೆಲಸ ಮಾಡಿದ ಅನುಭವ ಇವರಿಗಿದೆ. ಪುರುಷೋತ್ತಮ್ ಚಿತ್ರದ ನಿರ್ಮಾಣ ಹೊಣೆ ಹೊತ್ತಿದ್ದಾರೆ. ರಿಯಲ್ ಎಸ್ಟೇಟ್, ಲ್ಯಾಂಡ್ ಡೆವಲಪರ್ ಆಗಿರುವ ಇವರಿಗೆ ಚಿತ್ರರಂಗ ಹೊಸದು. ಆದರೆ ಒಳ್ಳೆ ಚಿತ್ರ ಕೊಡಬೇಕೆಂಬ ತುಡಿತ ಇವರಲ್ಲಿದೆ.

ಆದರೆ, ಚಿತ್ರದ ಶೀರ್ಷಿಕೆ ಮಾತ್ರ ಇನ್ನೂ ನಿರ್ಧಾರವಾಗಿಲ್ಲ. ಸದ್ಯಕ್ಕೆ ಕುಕ್ಕೆ ಸುಬ್ರಹ್ಮಣ್ಯದ ದಟ್ಟ ಕಾಡಿನಲ್ಲಿ ಚಿತ್ರತಂಡ ಬೀಡುಬಿಟ್ಟಿದೆಯಂತೆ. ಸತ್ಯ ಪೂರ್ಣ ಪ್ರಮಾಣದ ನಾಯಕರಾಗಿ ಅಭಿನಯಿಸಿದ 'ಗುಂಡ್ರಗೋವಿ' ಯಶಸ್ಸು ಕಾಣದಿದ್ದರೂ ಈ ಚಿತ್ರದಲ್ಲಿ ನಟನೆ ಅವರಿಗೆ ಗಾಂಧಿನಗರದಲ್ಲಿ ಒಂದಷ್ಟು ಅವಕಾಶ ಗಿಟ್ಟಿಸುವುದಂತೂ ನಿಜ ಎನ್ನುತ್ತಾರೆ ನಿರ್ದೇಶಕ ದಯಾಶಂಕರ್. ಮತ್ತೊಂದು ಚಿತ್ರಕ್ಕೂ ಈಗಾಗಲೇ ನಾಯಕನಾಗಿ ನಟಿಸುವ ತಯಾರಿಯಲ್ಲೂ ಇದ್ದಾರೆ ಎನ್ನುವ ಮಾತು ಇದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಸತ್ಯ, ಆ ದಿನಗಳು, ದಯಾಶಂಕರ್, ಪುರುಷೋತ್ತಮ