ಅತ್ಯುತ್ತಮ ಕನ್ನಡ ಚಿತ್ರ ಮತ್ತು ಚಿತ್ರಕಥೆಗೆ ರಾಷ್ಟ್ರಪ್ರಶಸ್ತಿ ಪಡೆದುಕೊಂಡ ಚಿತ್ರವಿದು. ಆದರೆ ಅದ್ಭುತ ಪಾತ್ರ ನಿರ್ವಹಣೆ ಮಾಡಿದ್ದ ವೈಜನಾಥ್ ಬಿರದಾರ್ ಪ್ರಶಸ್ತಿಯಿಂದ ವಂಚಿತರಾಗಿದ್ದರು. ಗಿರೀಶ್ ಕಾಸರವಳ್ಳಿಯವರ ನಿರ್ದೇಶನ ಮತ್ತೊಮ್ಮೆ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು. ಚಿತ್ರಮಂದಿರಗಳಲ್ಲಿ ನೋಡಲಾಗದೇ ಇದ್ದರೂ, ಒಂದು ವರ್ಗದ ಮಂದಿ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಈ ಚಿತ್ರದಲ್ಲಿ ಬಿರದಾರ್ ಅವರಿಗೆ ಜೋಡಿಯಾಗಿ ರಾಷ್ಟ್ರಪ್ರಶಸ್ತಿ ವಿಜೇತ ನಟಿ ಉಮಾಶ್ರೀ ನಟಿಸಿದ್ದರು. ಚಿತ್ರದ ಗುಣಮಟ್ಟವನ್ನು ಆಧರಿಸಿ ಟಾಪ್ 10ರಲ್ಲಿ ಕನಸೆಂಬ ಕುದುರೆಯನೇರಿ ಸಿನಿಮಾ ಸ್ಥಾನ ಪಡೆದಿದೆ.