ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ವಿವಾದದಿಂದ ಬಿಡುಗಡೆ ಭಾಗ್ಯ ಕಾಣದ 'ನೀ ಇಲ್ಲದೆ' (Nee Illade | Pooja Gandhi | KFCC | Chennapathi Nagamalleshvari)
PR
ಕಳೆದ ವರ್ಷ ಸೆಟ್ಟೇರಿದ್ದ 'ನೀ ಇಲ್ಲದೆ' ಚಿತ್ರಕ್ಕೆ ಇನ್ನೂ ಬಿಡುಗಡೆ ಭಾಗ್ಯ ಲಭಿಸಿಲ್ಲ. ಈ ವಾರ ತೆರೆಕಾಣ ಬೇಕಿದ್ದ ಚಿತ್ರ ಮತ್ತೆ ಮುಂದಕ್ಕೆ ಹೋಗಿದೆ. ನಾಗತಿಹಳ್ಳಿ ಚಂದ್ರಶೇಖರ್ ಮೂಲಕ ಕನ್ನಡ ಬೆಳ್ಳಿ ತೆರೆಗೆ ಪರಿಚಯವಾದ ರಘು ಮುಖರ್ಜಿ 'ನೀ ಇಲ್ಲದೆ' ಚಿತ್ರಕ್ಕೆ ನಾಯಕ. ಚಿತ್ರದ ಬಿಡುಗಡೆ ಮುಂದಕ್ಕೆ ಹೋಗಲು ಈ ಸಾರಿ ಕಾರಣ ಏನಪ್ಪಾ ಅಂದ್ರೆ ಪೂಜಾ ಗಾಂಧಿಗೆ ಬಾಕಿ ಸಂಭಾವನೆ ಸಂದಾಯವಾಗದೇ ಇರುವುದೇ ಆಗಿದೆ.

ಚಿತ್ರಕ್ಕೆ ನಿರ್ದೇಶಕ ಶಿವ ಗಣಪತಿ ಭರ್ಜರಿ ಪ್ರೇಮ ಕಥೆಯನ್ನೇ ಆರಿಸಿಕೊಂಡಿದ್ದಾರೆ. ದುಡ್ಡು ಹಾಕಿ ಚಿತ್ರ ನಿರ್ಮಿಸಿದವರು ಚನ್ನಪತಿ ನಾಗಮಲ್ಲೇಶ್ವರಿ. ಆದರೆ ತನಗೆ ಪೂರ್ತಿ ದುಡ್ಡು ಎಣಿಸಿಕೊಟ್ಟಿಲ್ಲ ಎನ್ನುವುದು ಪೂಜಾ ಗಾಂಧಿ ತಕರಾರು. ಸಮಸ್ಯೆ ಇನ್ನೂ ಬಗೆಹರಿದಿಲ್ಲ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಮತ್ತು ಕಲಾವಿದರ ಸಂಘಕ್ಕೆ ಪೂಜಾ ದೂರು ಸಲ್ಲಿಸಿದ್ದಾರೆ.

'ನೀ ಇಲ್ಲದೆ' ನಿರ್ಮಾಪಕರು ಪೂಜಾ ಗಾಂಧಿಗೆ ಬಾಕಿ ಸಂಭಾವನೆಯ ಬದಲು ಒಂದು ಪ್ರದೇಶದ ವಿತರಣಾ ಹಕ್ಕುಗಳನ್ನು ನೀಡುವುದಾಗಿ ಆಶ್ವಾಸನೆ ಕೊಟ್ಟಿದ್ದರಂತೆ. ಆದರೆ ಪೂಜಾ ಮಾತ್ರ ಅದಕ್ಕೆ ಒಪ್ಪಿರಲಿಲ್ಲ. 'ನನಗೆ ಬಾಕಿ ಹಣ ಕೊಡಿ ವಿತರಣೆ ಹಕ್ಕಿನ ಉಸಾಬರಿ ಬೇಡ' ಎಂದು ಅವರು ಪಟ್ಟು ಹಿಡಿದಿದ್ದಾರೆ. ಈ ವಿವಾದದಿಂದಾಗಿ 'ನೀ ಇಲ್ಲದೆ' ಚಿತ್ರಕ್ಕೆ ಸದ್ಯಕ್ಕಂತೂ ಬಿಡುಗಡೆ ಭಾಗ್ಯ ಇಲ್ಲವಾಗಿದೆ.
ಇವನ್ನೂ ಓದಿ