ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಕ್ಷಮೆ ಯಾಚಿಸಿ ದುಡ್ಡು ಕೊಟ್ಟ ಗಣೇಶ್: ರಮ್ಯಾ ವಿವಾದ ಸುಖಾಂತ್ಯ (Dandam Dashagunam | Ramya | A.Ganesh | Munirathna)
PR
ನಟಿ ರಮ್ಯಾ ಮತ್ತು 'ದಂಡಂ ದಶಗುಣಂ' ಚಿತ್ರದ ನಿರ್ಮಾಪಕ ಗಣೇಶ್ ನಡುವೆ ಬಾಕಿ ಹಣದ ವಿಚಾರಕ್ಕಾಗಿ ಏರ್ಪಟ್ಟಿದ್ದ ಕದನವು ಗುರುವಾರ ಅಂಬರೀಶ್ ನಿವಾಸದಲ್ಲಿ ಸುಖಾಂತ್ಯ ಕಂಡಿದೆ. ಗಣೇಶ್ ಕ್ಷಮೆ ಯಾಚಿಸಿ ಬಾಕಿ ಹಣವನ್ನು ರಮ್ಯಾರಿಗೆ ಒಪ್ಪಿಸಿದ್ದಾರೆ.

ಇಂದು ಕೊನೆಗೊಳ್ಳುತ್ತದೆ, ನಾಳೆ ಕೊನೆಗೊಳ್ಳುತ್ತದೆ ಎಂದು ಬೇರೆ-ಬೇರೆ ರೀತಿಯಲ್ಲಿ ತಿರುವು ಪಡೆದುಕೊಂಡಿದ್ದ 'ದಂಡಂ ದಶಗುಣಂ' ಚಿತ್ರದ ವಿವಾದ ಗುರುವಾರ ಅಂಬರೀಷ್ ಅವರ ನಿವಾಸದಲ್ಲಿ ಸುಖಾಂತ್ಯ ಕಂಡಿದೆ.

ಬೆಂಗಳೂರಿನ ಜೆ.ಪಿ.ನಗರದಲ್ಲಿರುವ ಅಂಬರೀಷ್ ನಿವಾಸದಲ್ಲಿ ನಿರ್ಮಾಪಕರ ಸಂಘ, ವಾಣಿಜ್ಯ ಮಂಡಳಿ, ಕಲಾವಿದರ ಸಂಘ, ವಿತರಕರ ಸಂಘದ ಪ್ರಮುಖರೆಲ್ಲ ಸಭೆ ಸೇರಿ ಈ ವಿವಾದಕ್ಕೆ ಅಂತ್ಯಹಾಡಿದ್ದಾರೆ.

ನಟಿ ರಮ್ಯಾ ಅವರಿಗೆ ಕೊಡಬೇಕಿದ್ದ ಒಂಬತ್ತು ಲಕ್ಷ ಹಣವನ್ನು ಅಂಬರೀಷ್ ಅವರ ಎದುರೇ ನಿರ್ಮಾಪಕ ಎ.ಗಣೇಶ್ ನೀಡಿದರು. ಈ ಸಂದರ್ಭ ತನ್ನಿಂದ ತಪ್ಪಾಗಿದೆ ಎಂದ ಗಣೇಶ್ ಕ್ಷಮೆಯಾಚಿಸಿದರು.

ದಿಢೀರ್ ಬೆಳವಣಿಗೆ....

'ದಂಡಂ ದಶಗುಣಂ' ಚಿತ್ರದ ವಿವಾದ ಕೇವಲ ರಮ್ಯಾ ಮತ್ತು ನಿರ್ಮಾಪಕ ಎ.ಗಣೇಶ್ ನಡುವೆ ಮಾತ್ರ ಏರ್ಪಟ್ಟಿತ್ತು. ಆದರೆ ದಿನ ಕಳೆದಂತೆ ಈ ವಿವಾದ ಕಲಾವಿದರ ಸಂಘ ಮತ್ತು ಚಲನ ಚಿತ್ರ ವಾಣಿಜ್ಯ ಮಂಡಳಿಯ ನಡುವೆ ಬೇರೆಯದೇ ಆದ ವಿವಾದವನ್ನು ಸೃಷ್ಟಿಸಿತ್ತು. ಆದರೆ ಬುಧವಾರ ರಮ್ಯಾ ಅವರಿಗೆ ಕೊಡಬೇಕಿದ್ದ ಹಣವನ್ನು ನಿರ್ಮಾಪಕ ಗಣೇಶ್ ಅವರು ಕೊಡಲು ತಯಾರಾಗಿದ್ದರು.

ಈ ನಡುವೆ ಗುರುವಾರ ವಿವಾದ ಹೊಸ ತಿರುವು ಪಡೆದುಕೊಂಡಿತು. ಚಲನ ಚಿತ್ರ ವಿತರಕರ ಸಂಘ ಒಮ್ಮತದೊಂದಿಗೆ ಕಲಾವಿದರ ಸಂಘದ ಪರವಾಗಿ ನಿಂತು, ಈ ವಿವಾದ ಇತ್ಯರ್ಥಗೊಳ್ಳದಿದ್ದರೆ 'ದಂಡಂ ದಶಗುಣಂ' ಚಿತ್ರವನ್ನು ಬಹಿಷ್ಕರಿಸುವುದಾಗಿ ತಿಳಿಸಿದ್ದರು.

ಈ ಸಂದರ್ಭಕ್ಕೆ ತಕ್ಕಂತೆ ಚಿತ್ರರಂಗದ ಎಲ್ಲಾ ಸಂಘಗಳೂ ಅಂಬರೀಷ್ ಅವರ ನಿವಾಸದಲ್ಲಿ ಸಭೆಸೇರಿ, ಅಂಬರೀಷ್ ಅವರ ತೀರ್ಮಾನಕ್ಕೆ ಬದ್ದರಾಗಿ ವಿವಾದಕ್ಕೆ ಇತಿಶ್ರೀ ಹಾಡಿದ್ದಾರೆ.
ಇವನ್ನೂ ಓದಿ