ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಉಪೇಂದ್ರನ ಜೊತೆ ಶ್ರೇಯಾ ನಟಿಸದಿರಲು ಕಾರಣವೇನು? (Upendra | Shreya | God Father | CCL)
PR
ರಿಯಲ್ ಸ್ಟಾರ್ ಉಪೇಂದ್ರನ ಚಿತ್ರದಲ್ಲಿ ಶ್ರೇಯಾ ಶರಣ್ ನಟಿಸುತ್ತಿದ್ದಾರೆ. ತಮಿಳಿನ ಗಾಡ್ ಫಾದರ್ ಚಿತ್ರದ ರಿಮೇಕ್‌ನಲ್ಲಿ ತ್ರಿಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಉಪೇಂದ್ರನ ಪ್ರಮುಖ ಪಾತ್ರವೊಂದಕ್ಕೆ ಶ್ರೇಯಾ ನಾಯಕಿಯಾಗಲು ಒಪ್ಪಿದ್ದಾರೆ. ಎಂಬ ಸುದ್ದಿಗಳೆಲ್ಲ ಈಗ ಹುಸಿಯಾಗಿದೆ. ತುಂಬಾ ಬ್ಯುಸಿಯಾಗಿರುವುದರಿಂದ ಸಮಯ ಹೊಂದಿಸಿಕೊಳ್ಳಲು ಆಗುತ್ತಿಲ್ಲ. ಆದರಿಂದ ಕನ್ನಡದ ಅವಕಾಶವನ್ನು ಕೈಬಿಟ್ಟಿದ್ದೇನೆ ಎಂದಿದ್ದಾರೆ ಶ್ರೇಯಾ. ಕನ್ನಡದಲ್ಲಿ ಪೂರ್ಣಪ್ರಮಾಣದಲ್ಲಿ ನಟಿಸದ ಶ್ರೇಯಾ, ಪುನಿತ್ ರಾಜ್ ಕುಮಾರ್ ಅವರ ಅರಸು ಚಿತ್ರದಲ್ಲಿ ಅಥಿತಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ಈಗ ಉಪೇಂದ್ರನ ಚಿತ್ರದಲ್ಲಿ ಶ್ರೇಯಾ ಕಾಣಿಸಿಕೊಳ್ಳುವ ಮೂಲಕ ಕನ್ನಡದ ಅಭಿಮಾನಿಗಳ ಮನಸ್ಸನ್ನು ರಂಜಿಸಲಿದ್ದಾರೆ ಎಂಬ ಮಾತುಗಳೂ ಕೇಳಿಬಂದಿತ್ತು. ಆದರೆ ನಟನೆಯ ಜತೆ ಕ್ರಿಕೆಟ್ ಆಟದ ಗೀಳು ಅಂಟಿಕೊಂಡಿರುವ ಚಿತ್ರನಟರು ಈಗ ಸೆಲೆಬ್ರಿಟಿ ಕ್ರಿಕೆಟ್ ಲೀಗ್‌ನಲ್ಲಿ (ಸಿಸಿಎಲ್) ಬ್ಯುಸಿಯಾಗಿರುವುದೂ ಈ ನಟಿ ಮತ್ತೂ ಬ್ಯುಸಿಯಾಗಿರಲು ಕಾರಣ.

ಸಿಸಿಎಲ್ ನಲ್ಲಿ ಕನ್ನಡ, ತಮಿಳು, ತೆಲುಗು, ಹಿಂದಿ ಚಿತ್ರನಟರು ಭಾಗವಹಿಸುತ್ತಿದ್ದು ಇದೊಂದು ಚಿತ್ರನಟರ ಅಪೂರ್ವ ಸಂಗಮ ಎನ್ನುತ್ತಿದೆ ಚಿತ್ರವಲಯ. ಹಾಗೂ ಈ ನಾಲ್ಕು ಭಾಷೆಗಳ ನಟರನ್ನು ಒಟ್ಟುಸೇರಿಸಿ ನಡೆಯುತ್ತಿರುವ ಸಿಸಿಎಲ್‌ಗೆ ಪ್ರಮುಖ ಪ್ರಚಾರ ರಾಯಭಾರಿಯಾಗಿ ಶ್ರೇಯಾ ಶರಣ್ ಆಯ್ಕೆಯಾಗಿದ್ದಾರೆ.

ಇದರೊಂದಿಗೆ ಕೆಲವೊಂದು ತಮಿಳು, ತೆಲುಗು ಚಿತ್ರವನ್ನು ಈ ಹಿಂದೆಯೇ ಒಪ್ಪಿಕೊಂಡಿರುವುದರಿಂದ ಆ ಕೆಲಸಗಳು ಪೂರ್ಣಗೊಳ್ಳದೆ ಸೂಪರ್ ಸ್ಟಾರ್ ಉಪೇಂದ್ರ ನಟಿಸುತ್ತಿರುವ ಚಿತ್ರದಲ್ಲಿ ನಟಿಸಲಾಗುತ್ತಿಲ್ಲ ಎಂದು ಇತ್ತೀಚೆಗೆ ಪ್ರತಿಕ್ರಿಯಿಸಿದ್ದಾರೆ. ಈ ಚಿತ್ರದಲ್ಲಿ ನಟಿಸುತ್ತಿಲ್ಲಾ ಎಂದ ಮಾತ್ರಕ್ಕೆ ಕನ್ನಡ ಚಿತ್ರದಲ್ಲಿ ನಟಿಸುವುದಿಲ್ಲಾ ಎಂದರ್ಥವಲ್ಲ, ಸಮಯ ಹೊಂದಿಸಿಕೊಂಡು ಖಂಡಿತವಾಗಿ ಕನ್ನಡದಲ್ಲಿ ನಟಿಸುತ್ತೇನೆ ಎಂದು ಹುಸಿನಗೆ ಬೀರಿ ಮುಂದುವರಿದರು ಶ್ರೇಯಾ ಶರಣ್!
ಇವನ್ನೂ ಓದಿ