ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಜಗ್ಗೇಶ್‌ಗೆ ಸಿಗದ ಅಧ್ಯಕ್ಷ ಗಾದಿಗೆ ಮುನಿರತ್ನ ಲಗ್ಗೆ ? (Jaggesh | Munirathna | Producer | Raktha Kanneeru)
EVENT
ಉಪೇಂದ್ರ ಮತ್ತು ಕುಮಾರ್ ಬಂಗಾರಪ್ಪ ಅಭಿನಯದ 'ರಕ್ತಕಣ್ಣೀರು' ಚಿತ್ರವನ್ನು ನಿರ್ಮಿಸಿದ ಮತ್ತು ಉಪೇಂದ್ರ ಹಾಗೂ ಪ್ರೇಮ್‌ ಅಭಿನಯದಲ್ಲಿ 'ಡೈರೆಕ್ಟರ್' ಎಂಬ ಚಿತ್ರವನ್ನು ನಿರ್ಮಿಸಲು ಹೊರಟಿರುವ ನಿರ್ಮಾಪಕ ಮುನಿರತ್ನರವರದ್ದು ನಿರ್ಮಾಪಕರ ವಲಯದಲ್ಲೊಂದು ದೊಡ್ಡ ಹೆಸರು. ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಹುದ್ದೆಗೆ ಈ ತಿಂಗಳಲ್ಲಿ ಚುನಾವಣೆ ನಡೆಯಲಿದ್ದು, ಆ ಹುದ್ದೆಯ ಆಕಾಂಕ್ಷಿಯಾಗಿರುವ ನಿರ್ಮಾಪಕ ಮುನಿರತ್ನ ಈಗಾಗಲೇ ನಾಮಪತ್ರವನ್ನು ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಇದಕ್ಕೂ ಮುಂಚೆ ಈ ಹುದ್ದೆಯನ್ನು ನಿರ್ಮಾಪಕ ಮತ್ತು ವಿತರಕ ಕೆ.ಸಿ.ಎನ್‌.ಚಂದ್ರು ನಿರ್ವಹಿಸುತ್ತಿದ್ದರು. ಕಾರಣಾಂತರಗಳಿಂದ ಆ ಹುದ್ದೆಗೆ ರಾಜೀನಾಮೆ ನೀಡಬೇಕಾಗಿ ಬಂದಿದ್ದರಿಂದ ಹೊಸ ಅಧ್ಯಕ್ಷರನ್ನು ಆರಿಸುವ ಪ್ರಕ್ರಿಯೆಗೆ ಚಾಲನೆ ಸಿಕ್ಕಿತೆಂದು ಹೇಳಬಹುದು.

ಸದರಿ ಹುದ್ದೆಗೆ ನಟ ಜಗ್ಗೇಶ್‌ ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿಗಳಿದ್ದವು. ಆದರೆ ತಾಂತ್ರಿಕ ಕಾರಣಗಳಿಂದ ಅವರು ಈ ನಡೆಯಿಂದ ಹಿಂದೆ ಸರಿಯಬೇಕಾಯಿತು. ಜಗ್ಗೇಶ್‌ರವರು ನಿರ್ಮಾಪಕರ ಸಂಘದ ಅಧಿಕೃತ ಸದಸ್ಯರಾಗಿಲ್ಲದಿದ್ದುದೇ ಇದಕ್ಕೆ ಕಾರಣ ಎಂಬ ಅಂಶ ನಂತರ ತಿಳಿದುಬಂತು.

ಲಭ್ಯವಿರುವ ಮಾಹಿತಿಗಳ ಪ್ರಕಾರ ಹಾಗೂ ಗಾಂಧಿನಗರದಲ್ಲಿ ಸುಳಿದಾಡುತ್ತಿರುವ ಮಾತುಕತೆಗಳ ಪ್ರಕಾರ ಮುನಿರತ್ನರವರು ಈ ಸ್ಥಾನವನ್ನು ಗೆಲ್ಲುವುದು ಖಚಿತವಾಗಿದೆಯಂತೆ. ಹಾಗೇನಾದರೂ ಆದಲ್ಲಿ ಅವರು ಅಧ್ಯಕ್ಷ ಗಾದಿಯಲ್ಲಿ ಹೇಗೆ ಕಾರ್ಯನಿರ್ವಹಿಸಬಹುದು ಎಂಬುದು ಚಿತ್ರೋದ್ಯಮಿಗಳೂ ಸೇರಿದಂತೆ ಚಿತ್ರರಸಿಕರಿಗೆ ಕುತೂಹಲಕರ ಸಂಗತಿಯೇ. ಅವರಿಗೆ ಶುಭವಾಗಲಿ.

ವೆಬ್‌ದುನಿಯಾ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!
ಇವನ್ನೂ ಓದಿ