ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸಿನಿಮಾ ಮುನ್ನೋಟ » ಬೆಂಗ್ಳೂರಿನ ದುಸ್ಥಿತಿಗೆ ಪರಿಹಾರ 'ಸ್ವಯಂಕೃಷಿ'ಯಲ್ಲಿದೆಯಂತೆ (Swayamkrishi | Ambarish | Veerendrababu | Latest Movies in Kannada | Latest Kannada Movie News | Kannada Film News | Kannada Movies)
EVENT
ಬಹಳ ದಿನಗಳಿಂದ ಸದ್ದುಮಾಡುತ್ತಿದ್ದ 'ಸ್ವಯಂಕೃಷಿ' ಚಿತ್ರ ಶುಕ್ರವಾರ ಬಿಡುಗಡೆಯಾಗುತ್ತಿದೆ. ಚಿತ್ರದ ಬಹುತೇಕ ಭಾಗಗಳು ಮತ್ತು ಹಾಡಿನ ಸನ್ನಿವೇಶಗಳು ಬಹಳ ಹಿಂದೆಯೇ ಚಿತ್ರಿತಗೊಂಡಿದ್ದವಾದರೂ, ಹೆಚ್ಚುವರಿ ದೃಶ್ಯಗಳ ಸೇರ್ಪಡೆಗಾಗಿ ಬಿಡುಗಡೆ ವಿಳಂಬವಾಗಿತ್ತು.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಈ ಚಿತ್ರದ ಹಾಡುಗಳು ಈಗಾಗಲೇ ಜನಪ್ರಿಯಗೊಂಡಿವೆ. ಅದರಲ್ಲೂ ವಿಶೇಷವಾಗಿ 'ನಾ ಬರೆದೆ ನಿನ್ನ ಹೆಸರಾ' ಎಂಬ ಹಾಡು ಈಗಾಗಲೇ ಸೂಪರ್‌ಹಿಟ್‌ ಹಾಡುಗಳ ಪಟ್ಟಿಯಲ್ಲಿದೆ. ಈ ಚಿತ್ರದ ನಾಯಕ-ನಿರ್ಮಾಪಕ-ನಿರ್ದೇಶಕರ ಸ್ವಾಮ್ಯದಲ್ಲಿರುವ ಸ್ವಯಂಕೃಷಿ ಎಂಬ ಹೆಸರಿನ ವಾಹಿನಿಯಲ್ಲಿ ಈ ಹಾಡುಗಳು ಪದೇ ಪದೇ ಬಿತ್ತರಗೊಳ್ಳುವ ಮೂಲಕ ವೀಕ್ಷಕರೊಂದಿಗೆ ನಂಟು ಬೆಳೆಸಿಕೊಂಡಿವೆ ಎನ್ನಬಹುದು.

ಈ ಚಿತ್ರದ ನಾಯಕ ವೀರೇಂದ್ರಬಾಬುರವರಿಗೆ ಕಸುಬು ಹೊಸದಾಗಿದೆಯಾದರೂ ಚಿತ್ರವನ್ನು ನಿರೂಪಿಸಿರುವ ರೀತಿ ಉತ್ತಮವಾಗಿದೆ ಎಂದು ಚಿತ್ರತಂಡದವರು ಅಭಿಪ್ರಾಯಪಟ್ಟಿದ್ದಾರೆ. ಭ್ರಷ್ಟಾಚಾರವೂ ಸೇರಿದಂತೆ ಇಂದಿನ ಭಾರತದಲ್ಲಿ ಹಾಸುಹೊಕ್ಕಾಗಿರುವ ಹಲವು-ಹನ್ನೊಂದು ಸಮಸ್ಯೆಗಳಿಗೆ, ಅದರಲ್ಲೂ ವಿಶೇಷವಾಗಿ ಬೆಂಗಳೂರು ಮಹಾನಗರಿಯನ್ನು ಕಾಡುತ್ತಿರುವ ಸಮಸ್ಯೆಗಳಿಗೆ ಈ ಚಿತ್ರದಲ್ಲಿ ಪರಿಹಾರವನ್ನು ಸೂಚಿಸಲಾಗಿದೆಯಂತೆ. ಹೀಗಾಗಿ ಚಿತ್ರದ ಕಥೆಯೇ ಹೀರೋ ಆಗಿದೆಯಂತೆ.

ರೆಬೆಲ್‌ಸ್ಟಾರ್ ಅಂಬರೀಷ್‌ರನ್ನು ಈ ಚಿತ್ರದಲ್ಲಿ ಮುಖ್ಯಮಂತ್ರಿಯ ಪಾತ್ರದಲ್ಲಿ ತೋರಿಸಿರುವುದು ಹಾಗೂ ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣಗೌಡರಿಗೆ ಒಂದು ಮಹತ್ವದ ಪಾತ್ರವನ್ನು ನೀಡಿರುವುದು ಹೈಲೈಟ್‌ ಆಗಲಿವೆ ಎಂದು ಹೇಳಲಾಗುತ್ತಿದೆ. ಈ ಎರಡೂ ಅಂಶಗಳು ಚಿತ್ರದ ಯಶಸ್ಸಿಗೆ ಕಾರಣವಾಗಲಿವೆ ಎಂಬುದು ಚಿತ್ರತಂಡದವರ ಅಭಿಪ್ರಾಯ.

ವೆಬ್‌ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!
ಇವನ್ನೂ ಓದಿ