ಎಲ್ಲಾ ಬಡ ರೋಗಿಗಳ ವೆಚ್ಚವನ್ನು ಭರಿಸಲು ಸರಕಾರಕ್ಕೆ ಕಷ್ಟವಾಗುವ ಕಾರಣ, ಖಾಸಗಿ ಆಸ್ಪತ್ರೆಗಳು ತಮ್ಮ ಚಿಕಿತ್ಸಾ ವೆಚ್ಚವನ್ನು ಕಡಿಮೆಗೊಳಿಸುವಂತೆ ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ ಖಾಸಗಿ ಆಸ್ಪತ್ರೆಗಳಿಗೆ ಮನವಿ ಮಾಡಿದ್ದಾರೆ.
ತಂತ್ರಜ್ಞಾನದಲ್ಲಿನ ತೀವ್ರತರದ ಅಭಿವೃದ್ಧಿಯಿಂದಾಗಿ ವೈದ್ಯಕೀಯ ಸಾಮಾಗ್ರಿಗಳ ವೆಚ್ಚದಲ್ಲಿ ಹೆಚ್ಚಳ ಉಂಟಾಗಿದ್ದರೂ, ಎಲ್ಲಾ ಬಡ ರೋಗಿಗಳ ವೆಚ್ಚವನ್ನು ಸರಕಾರವು ಭರಿಸಲು ಕಷ್ಟವಾಗುವ ಕಾರಣ, ಖಾಸಗಿ ಆಸ್ಪತ್ರೆಗಳು ಚಿಕಿತ್ಸಾ ವೆಚ್ಚವನ್ನು ಕಡಿತಗೊಳಿಸಬೇಕೆಂದು ಚಿದಂಬರಂ ತಿಳಿಸಿದ್ದಾರೆ.
ಎಲ್ಲಾ ಬಡರೋಗಿಗಳಿಗೆ ಉಚಿತವಾಗಿ ಅಥವಾ ಕಡಿಮೆ ದರದದಲ್ಲಿ ಚಿಕಿತ್ಸೆ ನೀಡಲು ಸರಕಾರಕ್ಕೆ ಸಾಧ್ಯವಿಲ್ಲದ ಕಾರಣ, ಬ್ಯಾಂಕುಗಳು ವಿವಿಧ ಕ್ಷೇತ್ರಗಳಿಗೆ ವಿವಿಧ ಬಡ್ಡಿದರದಲ್ಲಿ ಸಾಲ ನೀಡುವಂತೆ ಖಾಸಗಿ ಆಸ್ಪತ್ರೆಗಳು ಕೂಡಾ ವೆಚ್ಚ ಕಡಿತದತ್ತ ಗಮನ ಕೇಂದ್ರೀಕರಿಸಬೇಕೆಂದು ಚಿದಂಬರಂ ಒತ್ತಾಯಿಸಿದ್ದಾರೆ.
|