ನಿರಂತರ ಜಾಗತಿಕ ಕಚ್ಛಾತೈಲ ಬೆಲೆ ವರ್ಧನೆಯಿಂದ ಉಂಟಾಗಿರುವ ಬೆಲೆ ಏರಿಕೆ ತಗ್ಗದಿದ್ದಲ್ಲಿ, ಹಣದುಬ್ಬರ ನಿಯಂತ್ರಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಇನ್ನಷ್ಟು ತೀವ್ರ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಆರ್ಬಿಐ ಸುಳಿವು ನೀಡಿದೆ.
ರೇಪೋ ದರ ಮತ್ತು ನಗದು ಮೀಸಲು ಪ್ರಮಾಣವನ್ನು ಹೆಚ್ಚಳೊಳಿಸುವ ಸಂದರ್ಭದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಈ ಸೂಚನೆಯನ್ನು ನೀಡಿದೆ.
ಹಣಕಾಸು ಮತ್ತು ಆರ್ಥಿಕ ಅಭಿವೃದ್ಧಿಯ ಸಲುವಾಗಿ ಹಣಕಾಸು ನೀತಿಯ ದೃಷ್ಟಿಯಿಂದ ತೀವ್ರ ಕ್ರಮದ ಅಗತ್ಯವಿದೆ ಎಂದು ಆರ್ಬಿಐ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಬೆಲೆ ಏರಿಕೆಯನ್ನು ತಗ್ಗಿಸಲು ಮತ್ತು ಹಣದುಬ್ಬರವನ್ನು ನಿಯಂತ್ರಿಸಲು ಆರ್ಬಿಐ ಈ ತೀವ್ರ ಕ್ರಮವನ್ನು ಕೈಗೊಳ್ಳಲಿದೆ ಎಂದು ಕೇಂದ್ರ ಬ್ಯಾಂಕ್ ಸ್ಪಷ್ಟಪಡಿಸಿದೆ.
|