ಮಹತ್ವಾಕಾಂಕ್ಷೆಯ ನ್ಯಾನೋ ಕಾರು ಯೋಜನೆಯು ಹೆಚ್ಚುವರಿ ವೆಚ್ಚವನ್ನು ಎದುರಿಸುತ್ತಿದೆ ಎಂದು ಟಾಟಾ ಮೋಟಾರ್ಸ್ ತಿಳಿಸಿದ್ದು, ಏನೇ ಆದರೂ ಒಂದು ಲಕ್ಷ ರೂಪಾಯಿ ನಿರ್ವಹಣೆಯೊಂದಿಗೆ ಟಾಟಾ ನ್ಯಾನೋ ದುರ್ಗಾ ಪೂಜೆಯ ಅವಧಿಯಲ್ಲಿ ಸಿಂಗೂರ್ನಿಂದ ಮಾರುಕಟ್ಟೆಗೆ ಬಿಡುಗಡೆಗೊಳ್ಳಲಿದೆ ಎಂದು ಘೋಷಿಸಿದೆ.
ಕಳೆದ ವರ್ಷದ ನೆರೆಯ ಕಾರಣದಿಂದಾಗಿ ಸಿಂಗೂರ್ ಕಾರು ನಿರ್ಮಾಣ ಕೇಂದ್ರದಲ್ಲಿ ಸಂಪೂರ್ಣ ಯೋಜನೆಯನ್ನು ಮರುಕಾರ್ಯನಡೆಸಿದ್ದಾಗಿ ಕಂಪನಿಯ ಆಡಳಿತ ನಿರ್ದೇಶಕ ರವಿ ಕಾಂತ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಕಂಪನಿಗೆ ಈಗಾಗಲೇ ಸುಮಾರು 2,000 ಕೋಟಿ ರೂಪಾಯಿಗಳ ನಷ್ಟ ಉಂಟಾಗಿದೆ ಎಂದು ಕಾಂತ್ ಹೇಳಿದ್ದು,ಯೋಜನೆಗಾಗಿ ಹೂಡಿಟ್ಟ ಹಣವು 1,700 ಕೋಟಿ ರೂಪಾಯಿಗಳಾಗಿದೆ ಎಂದು ತಿಳಿಸಿದರು.
ಟಾಟಾ ಮೋಟಾರ್ಸ್ ಸಿಂಗೂರ್ ಯೋಜನೆಗೆ ಸಂಪೂರ್ಣ ಬದ್ಧವಾಗಿದ್ದು, ಎಲ್ಲವೂ ಯೋಜನೆಯಂತೆಯೇ ಸಾಗಿದಲ್ಲಿ ದುರ್ಗಾ ಪೂಜೆಯ ಅವಧಿಯಲ್ಲಿ ನ್ಯಾನೋ ಕಾರು ಮಾರುಕಟ್ಟೆಗೆ ಬಿಡುಗಡೆಗೊಳ್ಳಲಿದೆ ಎಂದು ಕಾಂತ್ ಹೇಳಿದರು.
|