ತೆರಿಗೆ ಕಳ್ಳರ ಸಂಖ್ಯೆಯಲ್ಲಿ ಆಗುತ್ತಿರುವ ಹೆಚ್ಚಳವನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ, ತೆರಿಗೆ ಸಂಗ್ರಹಗಾರರು ಅಂತವರ ಅಸ್ತಿಯನ್ನು ಮುಟ್ಟುಗೊಲು ಹಾಕಿ ಕೊಳ್ಳಬಹುದು ಎಂದು ಹೇಳಿದೆ.
ರಪ್ತುದಾರರು ಮತ್ತು ಉತ್ಪಾದಕ ವಲಯದಲ್ಲಿರುವವರಲ್ಲಿ ಈ ಚಾಳಿ ಹೆಚ್ಚಾಗಿ ಕಂಡು ಬರುತ್ತಿದ್ದು ತೆರಿಗೆ ವಂಚಿಸಿರುವುದು ಗೊತ್ತಾದರೆ
ತೆರಿಗೆ ಸಂಗ್ರಹದಾರರು ಅಂತವರ ಅಸ್ತಿಯನ್ನು ಎರಡು ವರ್ಷಗಳ ಕಾಲ ಮುಟ್ಟುಗೊಲು ಹಾಕಿ ಕೊಳ್ಳಬಹುದು ಎಂದು ಅಬಕಾರಿ ಮತ್ತು ಸೀಮಾ ಸುಂಕಗಳ ಕೇಂದ್ರೀಯ ಮಂಡಳಿಯ ಪ್ರಕಟಣೆ ತಿಳಿಸಿದೆ,
ಅದಾಗ್ಯೂ, ಇಪ್ಪತ್ತೈದು ಲಕ್ಷ ರೂಪಾಯಿಗಿಂತ ಹೆಚ್ಚು ತೆರಿಗೆ ವಂಚಿಸಿದ್ದರೆ ಈ ಕ್ರಮ ಕೈಗೊಳ್ಳಲಾಗುವುದು. ಈ ಕ್ರಮಕ್ಕೆ ಮುಂದಾಗುವ ಮುನ್ನ ಇಂತಹವರ ವಿರುದ್ಧ ಶೋಕಾಸ್ ನೋಟೀಸ್ ಜಾರಿಮಾಡಲಾಗುವುದು. ಅಸ್ತಿ ಮುಟ್ಟುಗೊಲು ಹಾಕಿಕೊಳ್ಳಲು ಕೇಂದ್ರೀಯ ಅಬಕಾರಿ ಆಯುಕ್ತರ ಒಪ್ಪಿಗೆ ಅಗತ್ಯವಾಗಿದೆ.
ಹಣಕಾಸು ಮಂತ್ರಿ ಪಿ.ಚಿದಬರಂ ಈ ಬಗ್ಗೆ ಕೇಂದ್ರೀಯ ಅಬಕಾರಿ ಮತ್ತು ಸೀಮಾ ಆಯುಕ್ತರುಗಳ ಜತೆ ಚರ್ತಿಸಿದ ಬಳಿಕ ಈ ಕ್ರಮ ಕೈಗೊಳ್ಳಲಾಗಿದೆ.
|