ಜಾಗತಿಕವಾಗಿ ಏರಿರುವ ಇಂಧ ಮತ್ತು ಆಹಾರ ವಸ್ತುಗಳ ಬೆಲೆ ಏರಿಕೆಯು 'ದೊಡ್ಡ ಪ್ರಮಾಣದಲ್ಲಿ' ಭಾರತವನ್ನು ತಟ್ಟದಿದ್ದರೂ, ಭಾರತ ಬಿಗಿ ಹಣಕಾಸು ನೀತಿ ಅನುಸರಿಸಬೇಕು ಎಂದು ಐಎಂಎಫ್ ಹೇಳಿದೆ.
ಆಹಾರ ಪದಾರ್ಥ ಮತ್ತು ಪೆಟ್ರೊಲಿಯಂ ಉತ್ಪನ್ನಗಳ ಬೆಲೆ ಏರಿಕೆಯಿಂದ ಕೆಲವು ದೇಶಗಳಿಗೆ ತಮ್ಮ ಪ್ರಜೆಗಳ ಹಸಿವು ನೀಗಿಸುವುದು ಮತ್ತದರೊಂದಿಗೆ ಆರ್ಥಿಕ ಸ್ಥಿರತೆ ಕಾಪಡಿಕೊಳ್ಳುವುದು ಕಷ್ಚವಾಗಬಹುದು ಎಂದದು ತಿಳಿಸಿದೆ.
ಅಂತರರಾಷ್ಟ್ರೀಯ ಹಣಕಾಸು ನಿಧಿ ನಡೆಸಿದ ಹೊಸ ಅಧ್ಯಯನವೊಂದು ಈ ವಿಷಯ ತಿಳಿಸಿದ್ದು ಅದನ್ನು ಸಂಸ್ಥೆಯ ಆಡಳಿತ ನಿರ್ದೇಶಕ ಡಾಮಿನಿಕ್ ಸ್ಟ್ರಾಸ್ ಕಾನ್ ಬಿಡುಗಡೆಗೊಳಿಸಿದರು.
ಹಣದುಬ್ಬರದಿಂದ ಆಮದು ಆಧಾರಿತ ಬಡ ಮತ್ತು ಅಭಿವೃಧಿಶೀಲ ದೇಶಗಳು ತೀವ್ರ ಬಾಧಿತಗೊಳ್ಳಲಿದೆ ಎಂದು ಈ ಅಧ್ಯಯನ ವರದಿ ತಿಳಿಸಿದೆ.
ಇಂತಹ ದೇಶಗಳಿಗೆ ಅಂತರರಾಷ್ಟ್ರೀಯ ಸಮುದಾಯ ಸಹಾಯ ಮಾಡಬೇಕು ಎಂದು ಈ ಸಂದರ್ಭದಲ್ಲಿ ಕಾನ್ ಹೇಳಿದರು.
|