ಜಾಗತಿಕ ಕಚ್ಛಾತೈಲ ಬೆಲೆಯ ನಿರಂತರ ಏರಿಕೆ ಪ್ರವೃತ್ತಿಯ ಮುಂದುವರಿಕೆಯ ಮುಂದಾಗಿ, ಅಧಿಕ ತೈಲ ಬೆಲೆ ಕಾಲಕ್ಕೆ ದೇಶವು ಸಿದ್ಧವಾಗಿರಬೇಕು ಎಂದು ಯೋಜನಾ ಆಯೋಗವು ಕರೆ ನೀಡಿದೆ.
ಅಧಿಕ ತೈಲ ಬೆಲೆ ಕಾಲದತ್ತ ದೇಶವು ಸಾಗಬೇಕಾಗಿದೆ ಎಂದು ಯೋಜನಾ ಆಯೋಗದ ಮುಖ್ಯಸ್ಥ ಮಾಂಟೆಕ್ ಸಿಂಗ್ ಆಹ್ಲುವಾಲಿಯಾ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಏನೇ ಆದರೂ, ಕಚ್ಛಾತೈಲ ಬೆಲೆ ಏರಿಕೆ ಮತ್ತು ಹಣದುಬ್ಬರ ವರ್ಧನೆಯಿಂದಾಗಿ ಆರ್ಥಿಕ ಅಭಿವೃದ್ಧಿಯ ಪ್ರಮಾಣವು ಶೇ.ಎಂಟಕ್ಕೆ ಇಳಿಕೆಗೊಳ್ಳಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಹದಿಮೂರು ವರ್ಷಗಳಲ್ಲೇ ಅಧಿಕ ಮಟ್ಟದಲ್ಲಿ ಏರಿಕೆ ಕಂಡಿರುವ ಹಣದುಬ್ಬರವನ್ನು ಹತೋಟಿಗೆ ತರುವ ನಿಟ್ಟಿನಲ್ಲಿ ಸರಕಾರವು ಜೂನ್ ಐದರಂದು ಇಂಧನ ಬೆಲೆಯನ್ನು ಹೆಚ್ಚುಗೊಳಿಸಿತ್ತು.
ಈ ನಡುವೆ, ರಖಂ ತೈಲ ಬೆಲೆಯನ್ನು ಅಕ್ಟೋಬರ್ ತಿಂಗಳ ಮೊದಲು ಪರಿಶೀಲನೆ ನಡೆಸಲಾಗುವುದು ಎಂದು ಸರಕಾರವು ತಿಳಿಸಿದ್ದು, ಅಕ್ಟೋಬರ್ ತಿಂಗಳ ಮುನ್ನ ಯಾವುದೇ ಪರಿಶೀಲನೆಯನ್ನು ನಡೆಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
|