ಹತ್ತಿ ಆಮದಿನ ಮೇಲಿನ ಸೀಮಾಸುಂಕವನ್ನು ಸರಕಾರವು ರದ್ದುಗೊಳಿಸಿದ್ದು, ಈ ಮೂಲಕ ಸೀಮಾಸುಂಕ ಕುರಿತಾದ ಜವಳಿ ಉದ್ಯಮದ ಬೇಡಿಕೆಗೆ ಸರಕಾರವು ಸ್ಪಂದಿಸಿದಂತಾಗಿದೆ.
ಹೆಚ್ಚುವರಿ ಸುಂಕದೊಂದಿಗೆ, ಎಲ್ಲಾ ವಿಧದ ಹತ್ತಿ ಆಮದಿನ ಮೇಲಿನ ಸೀಮಾ ಸುಂಕವನ್ನು ರದ್ದುಪಡಿಸಲಾಗಿದೆ ಎಂದು ಹಣಕಾಸು ಸಚಿವಾಲಯದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಕೇಂದ್ರ ಸೀಮಾ ಮತ್ತು ಅಬಕಾರಿ ಮಂಡಳಿಯು ಈ ಕುರಿತಾಗಿ ಸೂಚನೆಯನ್ನೂ ನೀಡಿದೆ ಎಂದು ಅವರು ಹೇಳಿದ್ದಾರೆ.
ಹತ್ತಿ ಆಮದು ಮೇಲಿನ ಸೀಮಾಸುಂಕ ರದ್ದು ಹಾಗೂ ರಫ್ತು ನಿಯಂತ್ರಣವನ್ನು ಆಧರಿಸಿ, ಸುಮಾರು 3,000 ಜವಳಿ ಸಂಸ್ಥೆಗಳು ಮುಷ್ಕರಕ್ಕೆ ಸಿದ್ಧಗೊಂಡಿದ್ದವು.
ದೇಶದಲ್ಲಿ ಯಾವುದೇ ಹತ್ತಿ ಸಂಗ್ರಹಣೆ ಇಲ್ಲದ ಕಾರಣ, ಸರಕಾರದ ಈ ನಿರ್ಧಾರವು ಹತ್ತಿ ಬೆಳೆಗಾರರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
|