ದೇಶದ ಹಣದುಬ್ಬರ ಸಮಸ್ಯೆಯು ಶೀಘ್ರದಲ್ಲೇ ಸುಧಾರಣೆ ಕಾಣುವ ಸಂಭವವಿಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ವೈ.ವಿ.ರೆಡ್ಡಿ ಸಂಸತ್ ಸಮಿತಿಯಲ್ಲಿ ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.
ಕೇಂದ್ರ ಬ್ಯಾಂಕಿನ ಇತ್ತೀಚಿನ ಕ್ರಮಗಳು ಬ್ಯಾಂಕಿಂಗ್ ವ್ಯವಸ್ಥೆಯ ನಗದು ದ್ರವ್ಯತೆಯ ಪ್ರಮಾಣವನ್ನು ಕಡಿಮೆ ಮಾಡಿದ್ದು, ಹಣದುಬ್ಬರ ನಿಯಂತ್ರಣಕ್ಕಾಗಿ ಇನ್ನಷ್ಟು ಕ್ರಮಗಳ ಅಗತ್ಯವಿದೆ ಎಂದು ರೆಡ್ಡಿ ಸಮಿತಿಯಲ್ಲಿ ತಿಳಿಸಿದ್ದಾರೆ.
ಜೂನ್ ತಿಂಗಳಲ್ಲಿ, ಭಾರತೀಯ ರಿಸರ್ವ್ ಬ್ಯಾಂಕ್ ರೆಪೋ ದರ ಮತ್ತು ಬಡ್ಡಿದರಗಳನ್ನು ಹೆಚ್ಚುಗೊಳಿಸಿದ್ದು, ಜುಲೈ 29ಕ್ಕೆ ನಿಗದಿಯಾಗಿರುವ ನೀತಿ ವಿಮರ್ಷೆಯಲ್ಲಿ ಮತ್ತೆ ರೆಪೋ ದರ ಏರಿಸುವ ಸಂಭವವಿದೆ.
ಏನೇ ಆದರೂ, ಇತರ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಿಗೆ ಹೋಲಿಸಿದರೆ, ಭಾರತದ ಪರಿಸ್ಥಿತಿಯು ಅತ್ಯಂತ ಕೆಟ್ಟದಾಗಿಲ್ಲ ಎಂಬುದಾಗಿ ರೆಡ್ಡಿ ಸ್ಪಷ್ಟಪಡಿಸಿದ್ದಾರೆ.
ಜೂನ್ 28ಕ್ಕೆ ಅಂತ್ಯಗೊಂಡ ವಾರದಲ್ಲಿ ಹಣದುಬ್ಬರವು ಶೇ.11.89ಕ್ಕೆ ಏರಿಕೆ ಕಂಡಿದ್ದು, ಇದು 13 ವರ್ಷಗಳಲ್ಲಿ ಅಧಿಕ ಮಟ್ಟದ ಏರಿಕೆಯಾಗಿದೆ.
|