ಕೇಂದ್ರ ಸರಕಾರದ ಹಣಕಾಸಿನ ನೀತಿಗಳಿಂದಾಗಿ ಹಣಕಾಸು ಸರಬರಾಜಿನಲ್ಲಿ ವೃದ್ಧಿಯಾಗಿದ್ದರೂ ದರಗಳ ಮೇಲೆ ಇನ್ನು ಒತ್ತಡವಿದೆ ಎಂದು ಕೇಂದ್ರ ಹಣಕಾಸು ಖಾತೆ ಸಚಿವ ಪಿ.ಚಿದಂಬರಂ ಹೇಳಿದ್ದಾರೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಗವರ್ನರ್ ಅವರನ್ನು ಭೇಟಿಯಾದಾಗ, ದರಗಳ ಮೇಲೆ ಇನ್ನು ಒತ್ತಡವಿದೆ ಎಂದು ಅವರು ಹೇಳಿದ್ದಾರೆ. ಗವರ್ನರ್ರೊಂದಿಗೆ ನಮಗೆ ವಿಶಾಲವಾದ ಒಪ್ಪಂದವಿದೆ ಎಂದು ಸಚಿವ ಚಿದಂಬರಂ ತಿಳಿಸಿದ್ದಾರೆ.
ಹಣಕಾಸಿನ ನಿಯಮಗಳು ದರಗಳ ಮೇಲೆ ಪ್ರಭಾವ ಬೀರಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಎಂದು ಆರ್ಬಿಐ ಮುಖ್ಯಸ್ಥರು ಕೇಂದ್ರ ಹಣಕಾಸು ಸಚಿವರಿಗೆ ಮಾಹಿತಿ ನೀಡಿದ್ದಾರೆ.
ಜುಲೈ 4 ಕ್ಕೆ ಅಂತ್ಯಗೊಂಡ ವಾರದ ಲಕ್ಕಾಚಾರ ಪ್ರಕಾರದ ಹಣದುಬ್ಬರದ ವಿವರಗಳನ್ನು ಬಹಿರಂಗಪಡಿಸಿದ ನಂತರ ಸಚಿವ ಚಿದಂಬರಂ ಹೇಳಿಕೆ ನೀಡಿದ್ದಾರೆ.
|