ಸಂಸತ್ತಿನಲ್ಲಿ ಸರಕಾರಕ್ಕೆ ವಿಶ್ವಾಸಮತ ದೊರೆತ ಹಿನ್ನೆಲೆಯಲ್ಲಿ ಸರಕಾರವು ಪೂರ್ಣಗೊಳ್ಳದ ತನ್ನ ಆರ್ಥಿಕ ಕಾರ್ಯಸೂಚಿಗಳಲ್ಲಿ ಮುಂದುವರಿಯಲಿದೆ ಎಂದು ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ ಹೇಳಿದ್ದಾರೆ.
ಸಂಸತ್ತಿನಲ್ಲಿ ವಿಶ್ವಾಸಮತದ ಅಧಿವೇಶನದಲ್ಲಿ 275 ಮತಗಳನ್ನು ಪಡೆದು ಜಯಸಾಧಿಸಿರುವುದರಿಂದ ಮುಂದಕ್ಕೆ ಸಾಗಲು ಆತ್ಮ ವಿಶ್ವಾಸ ನೀಡಿದೆ ಎಂದು ವಿಶ್ವಾಸಮತದಲ್ಲಿ ಗೆಲುವು ಪಡೆದ ನಂತರ ಸಚಿವ ಚಿದಂಬರಂ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಸಾಮಾಜಿಕ ಸಿದ್ಧಾಂತ ಹಾಗೂ ಆರ್ಥಿಕ ಸುಧಾರಣೆಗಳನ್ನು ವಿರೋಧಿಸದ ಇತರ ಸದಸ್ಯರನ್ನು ಸರಕಾರವು ಸಂಪರ್ಕಿಸುವುದೆಂದು ನುಡಿದ ಅವರು, ಬಳಿಕ ಸರಕಾವು ಸುಧಾರಣೆಗಳಲ್ಲಿ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ.
ಭಾರತ-ಅಮೆರಿಕ ನಾಗರಿಕ ಪರಮಾಣು ಒಪ್ಪಂದದ ಬೃಹತ್ ಸೇತುವೆಯನ್ನು ನಾವೀಗ ದಾಟಿದ್ದೇವೆ ಎಂದು ನುಡಿದ ಸಚಿವ ಚಿದಂಬರಂ, ಇನ್ನು ಸಾಮಾಜಿಕ ಹಾಗೂ ಆರ್ಥಿಕ ಸುಧಾರಣೆಗಳನ್ನು ಮುಂದುವರಿಸಿಕೊಂಡು ಹೋಗುವುದಾಗಿ ಹೇಳಿದ್ದಾರೆ.
|