ವಿಮೆ ಮಸೂದೆ ಕುರಿತಂತೆ ಸಂಸತ್ತಿನಲ್ಲಿ ಒಮ್ಮತ ನಿರ್ಧಾರಕ್ಕೆ ಬರಲು ಸರಕಾರ ಪ್ರಯತ್ನಿಸುತ್ತಿದೆ ಎಂದು ಕೇಂದ್ರ ಹಣಕಾಸು ಖಾತೆ ಸಚಿವ ಪಿ.ಚಿದಂಬರಂ ಹೇಳಿದ್ದಾರೆ.
ವಿದೇಶಿ ಬಂಡವಾಳ ಹೂಡಿಕೆ ಮಿತಿಯನ್ನು ಶೇ. 26ರಿಂದ 49ಕ್ಕೆ ಏರಿಸುವುದು ಸೇರಿದಂತೆ ವಿಮೆ ಮಸೂದೆ ಇನ್ನಿತರ ಕೆಲ ನಿರ್ಧಾರಗಳನ್ನು ಆದಷ್ಟು ಶೀಘ್ರವಾಗಿ ಜಾರಿಗೆ ತರಲು ನಿರ್ಧರಿಸಲಾಗಿದೆ. ಸಂಸತ್ತಿನಲ್ಲಿ ಬಾಕಿ ಉಳಿದಿರುವ ಮಸೂದೆಗಳನ್ನು ಇತ್ಯರ್ಥಗೊಳಿಸುವ ನಿರ್ಧಾರವನ್ನು ಸರಕಾರ ಹೊಂದಿದೆ ಎಂದು ಸಚಿವ ಚಿದಂಬರಂ ಹೇಳಿದ್ದಾರೆ.
ದೇಶದಲ್ಲಿ ಪ್ರಸ್ತುತ ಹೆಚ್ಚುತ್ತಿರುವ ಹಣದುಬ್ಬರದ ಸನ್ನಿವೇಶದಲ್ಲಿ ಮಾತನಾಡಿದ ಅವರು , ಕಚ್ಚಾ ತೈಲ ದರಗಳು ಹಣದುಬ್ಬರ ಏರಿಕೆಗೆ ಕಾರಣವಾಗಿದೆ ಎಂದರು. ಆರ್ಥಿಕತೆಯಿಂದ ಕೇವಲ ದರಗಳನ್ನು ನಿಯಂತ್ರಿಸಬಹುದು.ದೇಶದ ಆರ್ಥಿಕತೆಯನ್ನು ಸುಧಾರಣೆಯತ್ತ ಮುಂದುವರಿಸುವುದು ನಮ್ಮ ಗುರಿಯಾಗಿದೆ ಎಂದು ಹೇಳಿದರು.
|