ಜೂನ್ 30ಕ್ಕೆ ಅಂತ್ಯಗೊಂಡ ಮೊದಲ ತ್ರೈಮಾಸಿಕದಲ್ಲಿ ಹೆಚ್ಚಿನ ಬಡ್ಡಿದರಗಳಿಂದಾಗಿ ರಾಜ್ಯ ಪ್ರಾಯೋಜಕತ್ವದ ಬ್ಯಾಂಕ್ಗಳ ಲಾಭಗಳಿಕೆಗೆ ಅಡ್ಡಿಯಾಗಲಿದೆ ಎಂದು ಹಣಕಾಸು ಖಾತೆಯ ಸಹಾಯಕ ಸಚಿವ ಪವನ್ಕುಮಾರ್ ಬನ್ಸಾಲ್ ಹೇಳಿದ್ದಾರೆ.
ಬಡ್ಡಿದರ ಹೆಚ್ಚಳದಿಂದಾಗಿ ಮಾರುಕಟ್ಟೆಯಲ್ಲಿ ಎದುರಾಗುವ ಸಮಸ್ಯೆಗಳಿಂದಾಗಿ ಮೊದಲ ತ್ರೈಮಾಸಿಕ ಲಾಭದಲ್ಲಿ ಅಲ್ಪಮಟ್ಟಿಗೆ ಬಿಕ್ಕಟ್ಟು ಕಾಣಿಸಿದೆ ಎಂದು ಸಚಿವ ಪವನ್ಕುಮಾರ್ ತಿಳಿಸಿದ್ದಾರೆ.
ಪಿಂಚಿಣಿ ಕ್ಷೇತ್ರದಲ್ಲಿ ಖಾಸಗಿ ಕ್ಷೇತ್ರದ ಬ್ಯಾಂಕ್ಗಳಲ್ಲಿ ವಿದೇಶಿ ಬಂಡವಾಳ ಹೂಡಿಕೆ ಕುರಿತ ಮಸೂದೆ ಸಂಸತ್ತಿನಲ್ಲಿದ್ದು ಮುಂಬರುವ ದಿನಗಳಲ್ಲಿ ನಡೆಯುವ ಮುಂಗಾರು ಅಧಿವೇಶನದಲ್ಲಿ ಅನುಮೋದನೆ ದೊರೆಯುವ ಸಾಧ್ಯತೆಗಳಿವೆ ಎಂದು ಬನ್ಸಾಲ್ ಹೇಳಿದ್ದಾರೆ.
|