ವಿಶ್ವಬ್ಯಾಂಕ್ನ ಸಹಕಾರದೊಂದಿಗೆ ಸುಮಾರು 1.5 ಲಕ್ಷ ರೂಪಾಯಿ ವೆಚ್ಚದಲ್ಲಿ ಸ್ಥಳೀಯ ಕೆರೆಗಳನ್ನು ಅಭಿವೃದ್ಧಿಗೊಳಿಸಿ ಉಪಯುಕ್ತಯೋಗ್ಯವನ್ನಾಗಿ ಮಾಡಲು ಕೇಂದ್ರವು ನಿರ್ಧರಿಸಿದೆ ಎಂದು ಕೇಂದ್ರ ಗೃಹ ಸಚಿವ ಶಿವರಾಜ್ ಪಾಟೀಲ್ ತಿಳಿಸಿದ್ದಾರೆ.
ಸೋಲಾಪುರದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ತರಬೇತಿ ಶಿಬಿರವನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಪಾಟೀಲ್, ಸಾಲಮನ್ನಾ ಯೋಜನೆಯ ನಂತರ, ಗ್ರಾಮೀಣ ಪ್ರದೇಶದ ನೀರಾವರಿ ಯೋಜನೆಯ ವೃದ್ಧಿಯತ್ತ ಸರಕಾರವು ಗಮನಹರಿಸಲಿದೆ ಎಂದು ಹೇಳಿದರು.
ರೈತರ ಸಹಾಯದಿಂದ ಈ ಯೋಜನೆಯನ್ನು ಪ್ರಾರಂಭಿಸಲು ಸರಕಾರವು ನಿರ್ಧರಿಸಿದೆ ಎಂದು ಪಾಟೀಲ್ ಇದೇ ವೇಳೆ ತಿಳಿಸಿದರು.
ಈ ನಡುವೆ, ದೇಶದ ಭವಿಷ್ಯಕ್ಕೆ ಮಾಲಿನ್ಯಮುಕ್ತ ಇಂಧನ ಯೋಜನೆಯ ಅಗತ್ಯವಿದ್ದು, ಇಂತಹ ಮಾಲಿನ್ಯಮುಕ್ತ ಯೋಜನೆಗಳು ಕೇವಲ ಪರಮಾಣು ಇಂಧನದಿಂದ ಮಾತ್ರ ಸಾಧ್ಯ ಎಂದು ಕೇಂದ್ರ ಇಂಧನ ಸಚಿವ ಸುಶೀಲ್ ಕುಮಾರ್ ಶಿಂಧೆ ತಿಳಿಸಿದ್ದಾರೆ.
|