ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸದ್ಯದಲ್ಲಿಯೇ ಬೆಂಗಳೂರಿನಲ್ಲಿ ಜ್ಯೋತಿಷ್ಯ ಮಾಲ್
ಸೂಪರ್ ಮಾರುಕಟ್ಟೆ ಪ್ರವೇಶಿಸಿದರೆ, ನೀವು ನಿಮ್ಮ ಭವಿಷ್ಯ ಕಂಡುಕೊಳ್ಳಬಹುದು! ಕೆಲವು ವರ್ಷಗಳ ಹಿಂದೆ ಇಂತದೊಂದು ಬದಲಾವಣೆಯನ್ನು ಯಾರೂ ಊಹಿಸಿರಲಿಲ್ಲ. ಈಗ ದೇಶದಲ್ಲಿಯೇ ಪ್ರಥಮ ಬಾರಿಗೆ, ಬೆಂಗಳೂರಿನಲ್ಲಿ ಸದ್ಯವೇ ವಿಶಿಷ್ಠ ಆಸ್ಟ್ರೋಲಜಿ ಮಾಲ್‌ ಹೊರಹೊಮ್ಮಲಿದೆ.

ಜ್ಯೋತಿಷ್ಯರು, ಸಂಖ್ಯಾಶಾಸ್ತ್ರಜ್ಞರು, ಭವಿಷ್ಯ ತಜ್ಞರು, ಹಸ್ತಸಾಮುದ್ರಿ, ಗಿಣಿಶಾಸ್ತ್ರ ಇವೆಲ್ಲವೂ ಸದ್ಯದಲ್ಲಿಯೇ ಒಂದೇ ಸೂರಿನಡಿ ದೊರೆಯಲಿದೆ.

ಅಂತಹ ಹತ್ತು ಸೂಪರ್ ಮಾರುಕಟ್ಟೆಗಳನ್ನು ನಗರವು ಹೊಂದಲಿದ್ದು, ಮೊದಲ ಸೂಪರ್ ಮಾರುಕಟ್ಟೆಯು ಸೆಪ್ಟಂಬರ್ ತಿಂಗಳ ಮೊದಲ ವಾರದಲ್ಲಿ ಜೆ.ಪಿ.ನಗರದಲ್ಲಿ ಪ್ರಾರಂಭಗೊಳ್ಳಲಿದೆ. ಈ ಸೂಪರ್ ಮಾರುಕಟ್ಟೆಯು ರುದ್ರಾಕ್ಷಿ ಮಣಿ, ಯಂತ್ರ, ಪೂಜಾ ಸಾಧನಗಳು, ಜ್ಯೋತಿಷ್ಯ ಸಂಬಂಧಿತ ಪುಸ್ತಕ, ವಿಶೇಷ ರತ್ನ ಮುಂತಾದವುಗಳನ್ನು ಒಳಗೊಳ್ಳಲಿದೆ.

ಇದು ಕೇವಲ ಭವಿಷ್ಯ ಹೇಳುವುದು ಮಾತ್ರವೇ ಅಲ್ಲ. ಒಂದು ವೇಳೆ ಜ್ಯೋತಿಷ್ಯರು ಯಾವುದೇ ಪೂಜೆಗೆ ಸಲಹೆ ನೀಡಿದಲ್ಲಿ, ಅದಕ್ಕೆ ಬೇಕಾದ ಎಲ್ಲಾ ಆವಶ್ಯಕತೆಗಳನ್ನು ಸೂಪರ್ ಮಾರುಕಟ್ಟೆ ನಿಮಗಾಗಿ ವ್ಯವಸ್ಥೆ ಮಾಡುತ್ತದೆ. ಇದೊಂದು ರೀತಿ ಬಹುತಜ್ಞರನ್ನೊಳಗೊಂಡ ಆಸ್ಪತ್ರೆಯಿದ್ದಂತೆ. ಎಲ್ಲವೂ ಒಂದೇ ಸೂರಿನಡಿ ದೊರೆಯುತ್ತದೆ ಎನ್ನುತ್ತಾರೆ ಇದರ ನಿರ್ಮಾಪಕ ರಮೇಶ್ ತುಲ್ಸಿಯನ್.

ನಕ್ಷತ್ರ ಮತ್ತು ಗೃಹಗಳ ಹೆಸರನ್ನೊಳಗೊಂಡಿರುವ ಈ ಸೂಪರ್ ಮಾರುಕಟ್ಟೆಯು ಮಾರತಹಳ್ಳಿ, ಎಚ್ಎಸ್ಆರ್ ಲೇಔಟ್, ವಿಜಯನಗರ, ರಾಜಾಜಿನಗರ, ಆರ್.ಟಿ.ನಗರ, ಎಚ್ಎಸ್‌ಬಿಆರ್ ಲೇಔಟ್, ಕಸ್ತೂರಿನಗರ, ಸರ್ಜಾಪುರ ಮತ್ತು ಎಲೆಕ್ಟ್ರಾನಿಕ್ ಸಿಟಿಯಲ್ಲಿ ಶಾಖೆಗಳನ್ನು ಹೊಂದಲಿದೆ.

ಆದರೆ ಇಲ್ಲಿಗೆ ಪ್ರವೇಶ ಜ್ಯೋತಿಷ್ಯರಿಗೆ ಅಷ್ಟೊಂದು ಸುಲಭವಲ್ಲ. ಲಿಖಿತ ಪರೀಕ್ಷೆ ಮತ್ತು ಮೌಖಿಕ ಸಂದರ್ಶನದಲ್ಲಿ ಉತ್ತೀರ್ಣರಾಗಬೇಕು. ನಂತರ ಪರಿಣಿತ ತಂಡವು ಇವರನ್ನು ಆಯ್ದುಕೊಳ್ಳಲಿದೆ. ನಂತರವಷ್ಟೇ ಅವರು ಈ ಮಾಲ್‌ನಲ್ಲಿ ಜ್ಯೋತಿಷ್ಯ ಮಳಿಗೆಗಳನ್ನು ಪ್ರಾರಂಭಿಸಬಹುದಾಗಿದೆ.
ಮತ್ತಷ್ಟು
ಸಮಾನತೆ ಉತ್ತೇಜನ ಡಬ್ಲ್ಯೂಟಿಒ ಗುರಿಯಾಗಲಿ: ನಾಥ್
ಸಿಂಗಾಪುರ್ ಏರ್‌ಲೈನ್‌ಗೆ ಉತ್ತಮ ಏರ್‌ಲೈನ್ ಪ್ರಶಸ್ತಿ
ಕೈಗಾರಿಕಾ ಅಭಿವೃದ್ಧಿ ದರ ಶೇ.5.4ಕ್ಕೇರಿಕೆ
ಕಚ್ಚಾವಸ್ತುಗಳ ಪ್ರಭಾವದಲ್ಲಿ ಸ್ಟೀಲ್ ಬೆಲೆ: ರತನ್ ಟಾಟಾ
ಎಸ್‌ಬಿಐನಿಂದ ಬಿಪಿಎಲ್ಆರ್ ದರ ಏರಿಕೆ
ಜುಲೈಯಲ್ಲಿ ಕಾರು ಮಾರಾಟ ಶೇ.1.71ರಷ್ಟು ಇಳಿಕೆ