ಖಾಂಡ್ವಾ : ಭಾರತ ಸಂಚಾರ ನಿಗಮ ಖಸಗೀಕರಣ ಕುರಿತಂತೆ ಎದ್ದಿರುವ ಉಹಾಪೋಹಗಳನ್ನು ತಳ್ಳಿ ಹಾಕಿದ ಕೇಂದ್ರದ ಮಾಹಿತಿ ಮತ್ತು ತಂತ್ರಜ್ಞಾನ ಖಾತೆಯ ರಾಜ್ಯ ಸಚಿವ ಜ್ಯೋತೀರಾಧಿತ್ಯ ಸಿಂಧ್ಯ ಸಾರ್ವಜನಿಕ ಕ್ಷೇತ್ರದ ಟೆಲಿಕಾಂ ಸಂಸ್ಥೆ ಶೇ10ರ ಸಾಮರ್ಥ್ಯದ ಐಪಿಒಗಳೊಂದಿಗೆ ಹೊರಬರಲಿದೆ ಎಂದು ತಿಳಿಸಿದ್ದಾರೆ.
ಐಪಿಒದಿಂದ ಬಂದ ಹಣವನ್ನು ಭಾರತ ಸಂಚಾರ ನಿಗಮದ ಸಂಪರ್ಕವ್ಯವಸ್ಥೆಯನ್ನು ವಿಸ್ತರಿಸಲು ಬಳಸಿಕೊಳ್ಳಲಾಗುವುದು ಎಂದು ಸಿಂಧಿಯಾ ತಿಳಿಸಿದ್ದಾರೆ.
ಭಾರತ ಸಂಚಾರ ನಿಗಮ ಗ್ರಾಹಕರನ್ನು ಆಕರ್ಷಿಸಲು ಉನ್ನತ ಮಟ್ಟದ ಸೇವೆಯನ್ನು ನೀಡುವ ಗುರಿಯನ್ನು ಹೊಂದಿದ್ದು, ಭವಿಷ್ಯದ ಕುರಿತಂತೆ ಚಿಂತಿಸದೇ ಖಾಸಗಿ ಟೆಲಿಕಾಂ ಕಂಪೆನಿಗಳೊದಿಗೆ ಕೂಡಾ ಸ್ಪರ್ಧಿಸಲಿದೆ ಎಂದು ಸಚಿವ ಸಿಂಧಿಯಾ ಹೇಳಿದ್ದಾರೆ.
ಜಿಎಸ್ಎಂ ಸಂಪರ್ಕ ಕುರಿತಂತೆ ಮಾತನಾಡಿದ ಸಚಿವ ಸಿಂಧಿಯಾ ಪ್ರಸ್ತುತ ರಾಜ್ಯದಲ್ಲಿ 1,392 ಗೋಪುರಗಳಿದ್ದು,ಮುಂಬರುವ 2009ರ ವೇಳೆಗೆ 4500 ಗುರಿಯನ್ನು ತಲುಪಲಾಗುವುದು ಎಂದು ಹೇಳಿದ್ದಾರೆ.
|